ಹಸಿವಿನ ಸಂಕಟ ಸರಕಾರಕ್ಕೆ ಅರ್ಥವಾಗುತ್ತಿಲ್ಲ – ರಿಕ್ಷಾಚಾಲಕರಿಗೆ ರೇಷನ್ ಕಿಟ್ ವಿತರಿಸಿದ ಶಾಸಕ ಯು ಟಿ ಖಾದರ್

Spread the love

ಹಸಿವಿನ ಸಂಕಟ ಸರಕಾರಕ್ಕೆ ಅರ್ಥವಾಗುತ್ತಿಲ್ಲ – ರಿಕ್ಷಾಚಾಲಕರಿಗೆ ರೇಷನ್ ಕಿಟ್ ವಿತರಿಸಿದ ಶಾಸಕ ಯು ಟಿ ಖಾದರ್

ಮಂಗಳೂರು: ರಿಕ್ಷಾ ಚಾಲಕ ಮಾಲಕರಿಗೆ ಸಹಕಾರ ನೀಡುವ ಸಲುವಾಗಿ ಶನಿವಾರ ಉಳ್ಳಾಲ ಕ್ಷೇತ್ರದಲ್ಲಿ ಶಾಸಕ ಯು.ಟಿ.ಖಾದರ್ ರೇಷನ್ ಕಿಟ್ ವಿತರಣೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಸರಕಾರದಿಂದ ರಿಕ್ಷಾ ಚಾಲಕರು,ಟೆಂಪೋ ಚಾಲಕರು, ಮ್ಯಾಕ್ಸಿ ಕ್ಯಾಬ್,ಟೈಲರ್ ಗಳಿಗೆ ದಿನಗೂಲಿ ಯಿಂದ ಜೀವನ ನಡೆಸುವವರಿಗೆ ಸಹಕಾರ ನೀಡುವುದು ಸರಕಾರದ ಕರ್ತವ್ಯ. ಆದರೆ ಸರಕಾರ ಸಹಕಾರ ನೀಡುವಲ್ಲಿ ವಿಫಲವಾಗಿದ್ದರಿಂದ ಖುದ್ದು ನಾನೇ ನನ್ನ ಕ್ಷೇತ್ರದ ಜನರಿಗೆ ಪ್ರಥಮ ಹಂತದಲ್ಲಿ ಸಾವಿರಾರು ಆಟೋ ಚಾಲಕರಿಗೆ ರೆಷನ್ ಕಿಟ್ ವಿತರಿಸಿದ್ದೇನೆ. ಹಸಿವಿನ ದಾಹ ಅರಿತವರು ಕಿಟ್ ತೆಗೆದುಕೊಂಡು ಹೋಗಲು ಬಂದಿದ್ದು ಅಂತರ ಕಾಪಡುವಲ್ಲಿ ಸ್ವಲ್ಪ ಮಟ್ಟಿಗೆ ಕಷ್ಟವಾಗಿದೆ. ಇಲ್ಲಿ ಕೊರೋನಾ ಮಾರಿಗಿಂತ ಹಸಿವಿನಿಂದ ಬಳಲುವವರೆ ಅಧಿಕ ಜನರಿದ್ದಾರೆ. ಇವತ್ತಿನ ಕಾರ್ಯಕ್ರಮದ ಮೂಲಕವಾದರು ಸರಕಾರ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು.

ಎರಡು ಗಂಟೆ ಬಿಸಿಲಿನಲ್ಲಿ ನಿಂತು ಸಂಸಾರದ ಹೊಟ್ಟೆ ತುಂಬಿಸಲು ಬಂದ ರಿಕ್ಷಾ ಚಾಲಕರ ಪರಿಸ್ಥಿತಿ ಜಿಲ್ಲಾಡಳಿತ ಹಾಗೂ ಸರಕಾರ ಗಮನಿಸ ಬೇಕು. ಇವತ್ತು ಕೇವಲ ರರೇಷನ್ ಕಿಟ್ ವಿತರಣೆಯ ಕಾರ್ಯಕ್ರಮವಲ್ಲ.ಸರಕಾರ ಮತ್ತು ಜಿಲ್ಲಾಡಳಿತ ಕಣ್ಣು ತೆರೆಯುವ ಸಮಯ. ಎಲ್ಲಾ ದಿನಗೂಲಿ ನೌಕರರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು.ಸೋಶಿಯಲ್ ಡಿಸ್ಟೆಂಸ್ ಕುರಿತು ಮಾತನಾಡುವವರು ಹಸಿವಿನ ಸಂಕಟ ಅರ್ಥವಾಗುವುದಿಲ್ಲ ಏಕೆ? ಸರಕಾರದಿಂದ ಸಹಕಾರ ಸಿಕ್ಕಿದ್ದರೆ ಇವತ್ತು ಕಿಟ್ ಗಾಗಿ ಜನ ಸರಥಿ ಸಾಲಿನಲ್ಲಿ ನಿಲ್ಕುತ್ತಿರಲಿಲ್ಲ.ಕಿಟ್ ತೆಗೆದುಕೊಳ್ಳಲು ಬಂದವರು ಮುನ್ನೆಚ್ಚರಿಕೆಯಾಗಿ ಮಾಸ್ಕ್ ಧರಿಸಿದ್ದು ಮನೆಗೆ ತೆರಳಿದ ಮೇಲೂ ಎಚ್ಚರ ವಹಿಸುತ್ತಾರೆಂಬ ಭರವಸೆ ಇದೆ. ಎಂದರು

ಕೇವಲ ವಾಟ್ಸಪ್ ಸಂದೇಶಕ್ಕೆ ಬಂದ ಇಷ್ಟೊಂದು ಜನರ ಹಸಿವಿನ ಸಂಕಟ ಸರಕಾರಕ್ಕೆ ಅರಿವಿಲ್ಲ.ಹಸಿವಿನಿಂದ ಬಡಪಾಯಿ ದಿನ ಕಳೆದರೆ ಅದಕ್ಕೆ ಹೊಣೆ ಸರಕಾರವೇ? ಇದು ಕೇವಲ ನನ್ನ ಕ್ಷೇತ್ರದ ಉಳ್ಳಾಲ ನಗರ ವ್ಯಾಪ್ತಿ ಯ ಜನರಿಗೆ ಹಂಚಲಾಗಿದ್ದು ಗ್ರಾಮೀಣ ಪ್ರದೇಶ ಇನ್ನಷ್ಟು ಬಾಕಿ ಇದೆ.ಎಲ್ಲಾ ಹಂತದಲ್ಲೂ ಕಿಟ್ ವಿತರಣೆಗೆ ಸ್ಥಳ ನಿಗದಿಯಾಗಿದ್ದು ಸೋಶಿಯಲ್ ಡಿಸ್ಟೆಂಸ್ ಕಾದುಕೊಂಡೆ ವಿತರಣೆ ಮಾಡುತ್ತೇವೆ ಎಂದರು.


Spread the love