ಹಿರಿಯಡ್ಕ ಪಂಪ್ ಹೌಸ್ ನಲ್ಲಿ ಸಿಲುಕಿದ್ದ ಇಬ್ಬರು ಸಿಬಂದಿಗಳನ್ನು ರಕ್ಷಿಸಿದ ಎನ್.ಡಿ.ಆರ್.ಎಫ್ ತಂಡ

Spread the love

ಹಿರಿಯಡ್ಕ ಪಂಪ್ ಹೌಸ್ ನಲ್ಲಿ ಸಿಲುಕಿದ್ದ ಇಬ್ಬರು ಸಿಬಂದಿಗಳನ್ನು ರಕ್ಷಿಸಿದ ಎನ್.ಡಿ.ಆರ್.ಎಫ್ ತಂಡ

ಉಡುಪಿ: ಎರಡು ದಿನಗಳ ನಿರಂತರ ಮಳೆಯಿಂದ ಉಕ್ಕಿಹರಿದ ಸುವರ್ಣಾ ನದಿ ಬಳಿಯ ಬಜೆ ಅಣೆಕಟ್ಟಿನ ಪಂಪ್ ಹೌಸ್ ನಲ್ಲಿ ಸಿಲುಕಿದ್ದ ಇಬ್ಬರು ಸಿಬಂದಿಗಳನ್ನು ಎನ್ ಡಿ ಆರ್ ಎಫ್ ತಂಡ ರಕ್ಷಣೆ ಮಾಡಿದೆ.

ರಕ್ಷಿಸಲ್ಪಟ್ಟ ಸಿಬಂದಿಯನ್ನು ಮಂಜುನಾಥ್ ಮತ್ತು ಗೋವಿಂದ್ ಎಂದು ಗುರುತಿಸಲಾಗಿದೆ

ಇಬ್ಬರು ಸಿಬಂದಿಗಳು ಪಂಪ್ ಹೌಸ್ ನಲ್ಲಿ ರಾತ್ರಿ ಹೊತ್ತು ಮಲಗಿದ್ದು ರಾತ್ರಿ ಒಮ್ಮಿಂದೊಮ್ಮೆಲೆ ನದಿ ಉಕ್ಕೇರಿದ ಪರಿಣಾಮ ದಡಕ್ಕೆ ಬರಲು ಸಾಧ್ಯವಾಗದೆ ಸಿಲುಕಿಕೊಂಡಿದ್ದಾರು. ಜೀವ ಭಯದಿಂದ ಇಬ್ಬರು ಸಿಬಂದಿಗಳು ಪಂಪ್ ಹೌಸ್ ನ ಜನರೇಟರ್ ಮೇಲೆ ಕುಳಿತು ರಕ್ಷಣೆಗೆ ಮನವಿ ಮಾಡುತ್ತಿದ್ದರು.

ನದಿಯ ಭೋರ್ಗರೆತದ ಕಾರಣ ಕಾರ್ಯಾಚರಣೆ ವಿಳಂಬಗೊಂಡಿದ್ದು ಮಂಗಳೂರಿನಿಂದ ಬಂದ ಎನ್.ಡಿ. ಆರ್.ಎಫ್ ತಂಡ ಬೋಟ್ ಮೂಲಕ ತೆರಳಿ ಇಬ್ಬರು ಸಿಬಂದಿಗಳನ್ನು ರಕ್ಷಿಸಿದ್ದಾರೆ.


Spread the love