ಹೆಚ್.ಪಿ.ಸಿಎಲ್ ನಿಂದ ಕೇರಳ ಪ್ರವಾಹ ಪೀಡಿತರಿಗೆ ನೆರವು

Spread the love

ಹೆಚ್.ಪಿ.ಸಿಎಲ್ ನಿಂದ ಕೇರಳ ಪ್ರವಾಹ ಪೀಡಿತರಿಗೆ ನೆರವು

ಮಂಗಳೂರು: ಹಿಂದೂಸ್ಠಾನ ಪೆಟ್ರೋಲಿಯಂ ಕಾಪೆರ್Çರೇಶನ್ ಮಂಗಳೂರು ವಿಭಾಗದ ವತಿಯಿಂದ ಕೇರಳದ ಪ್ರವಾಹ ಪೀಡಿತರಿಗೆ ಸಹಾಯ ಹಸ್ತ ನೀಡಿತು. ಮಂಗಳೂರು ವಿಭಾಗದ ಎಲ್ಲಾ ಗ್ಯಾಸ್ ವಿತರಕರು, ಹೆಚ್ ಪಿ ಸಿ ಎಲ್ ನ ಅಧಿಕಾರಿಗಳ್ಯ್ ಮತ್ತು ಕೆಲಸಗಾರರು ಸೇರಿ 5 ಲಕ್ಷಕ್ಕೂ ಅಧಿಕ ಮೊತ್ತದ ಔಷದ, ಕಂಬಳಿ ಮತ್ತು ಇತರ ಅಗತ್ಯ ವಸ್ತುಗಳನ್ನು ಕೇರಳಕ್ಕೆ ಕಳುಹಿಸಲಾಯಿತು.

ಮಂಗಳೂರು ವಿಭಾಗದ ಚೀಫ್ ರೀಜನಲ್ ಮ್ಯಾನೇಜರ್ ರಮೇಶ್ ನಾಗರಾಜ್ ಈ ಸಂದರ್ಭದಲ್ಲಿ ಮಾತನಾಡಿ “ಸಂತ್ರಸ್ತರಿಗೆ ನೆರವು ನೀಡುವುದು ಮಾನವೀಯ ಕರ್ತವ್ಯ. ವಿಭಾಗದ ಎಲ್ಲರು ಇದಕ್ಕೆ ಸಹಕರಿಸಿದುದರಿಂದ ಇದು ಸಾಧ್ಯವಾಯಿತು. ಕೊಡಗಿನ ಸಂತ್ರಸ್ತರಿಗೆ ಸ್ವಲ್ಪ ಸಮಯದ ನಂತರ ಅವರ ಅಗತ್ಯವನ್ನು ನೋದಿ ವಸ್ತುಗಳನ್ನು ಕಳುಹಿಸಲಾಗುವುದು ” ಎಂದರು.

ಈ ಸಂದರ್ಭದಲ್ಲಿ ಸೇಲ್ಸ್ ಆಫೀಸರ್ ಜುನೇದ್, ಪ್ಲಾಂಟ್ ಮ್ಯಾನೇಜರ್ ಆಕಾಶ್, ಎಲ್ಲಾ ಅಧಿಕಾರಿ ವರ್ಗ, ಹೆಚ್.ಪಿ.ಗ್ಯಾಸ್ ವಿತರಕರ ಸಂಘದ ಅಧ್ಯಕ್ಷ ಎಸ್.ನಿತ್ಯಾನಂದ ಪೈ ಮತ್ತು ಗ್ಯಾಸ್ ವಿತರಕರು, ಸಿಬ್ಬಂದಿ ವರ್ಗದವರು ಉಪಸ್ಠಿತರಿದ್ದರು.


Spread the love