ಭಾರತ್ ಜೋಡೊ ಸಂಘಗಳ ಸ್ಥಾಪನೆಗೆ ಉಡುಪಿ ಜಿಲ್ಲಾ ಸಂಯೋಜಕರಾಗಿ ರೋಶನಿ ಒಲಿವರ್ ನೇಮಕ

Spread the love

ಭಾರತ್ ಜೋಡೊ ಸಂಘಗಳ ಸ್ಥಾಪನೆಗೆ ಉಡುಪಿ ಜಿಲ್ಲಾ ಸಂಯೋಜಕರಾಗಿ ರೋಶನಿ ಒಲಿವರ್ ನೇಮಕ

ಉಡುಪಿ : ಭಾರತ್ ಜೋಡೊ ಸಂಘಗಳ ಸ್ಥಾಪನೆಗೆ ಉಡುಪಿ ಜಿಲ್ಲೆಯಲ್ಲಿ ರೋಶನಿ ಒಲಿವರ್ ಅವರ ಸಂಯೋಜಕತ್ವದಲ್ಲಿ ಸಮಿತಿ ರಚನೆ ಮಾಡಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ ಅವರು ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಸರ್ಕಾರದ ಆದೇಶದಂತೆ ಪ್ರತಿಯೊಂದು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಯುವಜನರಲ್ಲಿ ಕ್ರೀಡಾ ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಮತ್ತು ಸಮುದಾಯದ ಸಾಮಾಜಿಕ ಸಾಮರ್ಥ್ಯವನ್ನು ಉತ್ತೇಜಿಸುವ ಉದ್ದೇಶದಿಂದ ತಲಾ 10 ಸದಸ್ಯರನ್ನು ಒಳಗೊಂಡ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವಂತೆ ನಿರ್ದೇಶನ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ, ಸ್ಥಳೀಯ ಸಂಸ್ಥೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಸ್ಥಳೀಯ ಕಾರ್ಯಕರ್ತರು ಹಾಗೂ ಯುವಜನರನ್ನು ಪ್ರೋತ್ಸಾಹಿಸಿ, ಅಗತ್ಯ ಮಾರ್ಗದರ್ಶನ ನೀಡುವುದರೊಂದಿಗೆ ಸರ್ಕಾರದ ಆಶಯದಂತೆ ಭಾರತ್ ಜೋಡೋ ಯುವ ಸಂಘಗಳನ್ನು ರಚಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕಾಗಿದೆ.

ಈ ಕಾರ್ಯವನ್ನು ಸಮರ್ಪಕವಾಗಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಂಬಂಧಿತ ಗ್ರಾಮ ಪಂಚಾಯಿತಿಗಳಲ್ಲಿ ವಿದ್ಯಾರ್ಥಿ ಕಾಂಗ್ರೆಸ್ (NSUI), ಯುವ ಕಾಂಗ್ರೆಸ್ ಹಾಗು ಮಹಿಳ ಕಾಂಗ್ರೆಸ್ ಸದಸ್ಯರನೊಳಗೊಂಡ ಸಂಘಗಳ ರಚನೆ ಹಾಗೂ ಸಮನ್ವಯ ಕಾರ್ಯವನ್ನು ನಿರ್ವಹಿಸಲು ಕೆಳಕಂಡವರನ್ನು ನೇಮಕ ಮಾಡಲಾಗಿರುತ್ತದೆ.

  • ರೋಶನಿ ಒಲಿವರ್ – ಸಂಯೋಜಕರು
  • ಆನಂದ್ ಪೂಜಾರಿ
  • ಸುಧೀರ್ ಕುಮಾರ್
  • ಮೀನಾಕ್ಷಿ ಮಾಧವ
  • ರೋಶನ್

Spread the love
Subscribe
Notify of

0 Comments