ಪ್ರತಾಪ್ ಪೂಜಾರಿ ಕೊಲೆ : ಎಂಟು ಆರೋಪಿಗಳ ಬಂಧನ

Spread the love

ಪ್ರತಾಪ್ ಪೂಜಾರಿ ಕೊಲೆ : ಎಂಟು ಆರೋಪಿಗಳ ಬಂಧನ

ಮಂಗಳೂರು: ಗೆಳೆಯರೊಂದಿಗೆ ಮದ್ಯಪಾನ ನಡೆಸಿ ಮಾತಿನ ಚಕಮಕಿ ನಡೆದ ಪರಿಣಾಮ ಕೊಲೆಯಾದ ಪ್ರತಾಪ್ ಪೂಜಾರಿ ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ಪೋಲಿಸರು ಎಂಟು ಮಂದಿ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಸಾಗರ್ ಪೂಜಾರಿ, ಮಿಥುನ್, ಕೌಶಿಕ್, ತಿಲಕ್ ರಾಜ್, ನಿಖಿಲ್ ಶೆಟ್ಟಿ, ಮನೀಷ್ ಪೂಜಾರಿ, ಶಿವರಾಜ್ ಮತ್ತು ರಾಜೇಶ್ ಎಂದು ಗುರುತಿಸಲಾಗಿದೆ.

ಫೆಬ್ರವರಿ 18 ರಂದು ರಾತ್ರಿ 11.49 ರ ಸುಮಾರಿಗೆ ಹರ್ಷಿತ್ ಶೆಟ್ಟಿ, ತನ್ನ ಸ್ನೇಹಿತರಾದ ವಿತೇಶ್, ಮಣಿಕಂಠ ಅವರೊಂದಿಗೆ ತನ್ನ ಮನೆಯ ಅಂಗಳದಲ್ಲಿ ಮದ್ಯಪಾನ ಮಾಡುತ್ತಿರುವ ವೇಳೆ ಕೌಶಿಕ್ ಎಂಬವರ ಅಣ್ಣ ನಿತೇಶ್ ಎಂಬವರಿಗೆ ಮಣಿಕಂಠ ಹೊಡೆದಿದ್ದು, ಅದಕ್ಕೆ ರಾಜಿ ಮಾಡಲು ಬಂದ ಸಾಗರ್, ಮಿಥುನ್, ನಿಖಿಲ್ ಶಿವು, ಶರಣ್, ಮನೀಷ್ ಹಾಗೂ ರಾಜೇಶ್ ಅವರೊಂದಿಗೆ ಮಾತಿನ ಚಕಮಕಿ ಉಂಟಾಗಿ ತಲವಾರಿನಿಂದ ಪ್ರತಾಪ್ ಪೂಜಾರಿಗೆ ಕಡಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಪ್ರಕರಣದ ಆರೋಪಿಗಳ ಪತ್ತೆಗೆ ನಗರ ಆಯುಕ್ತ ಚಂದ್ರಶೇಖರ, ಉಪ ಆಯುಕ್ತರಾದ ಶಾಂತರಾಜು, ಸಂಜೀವ್ ಪಾಟೀಲ್ ಪೋಲಿಸ್ ಸಹ ಆಯುಕ್ತರಾದ ಶೃತಿ ಅವರ ಮಾರ್ಗದರ್ಶನದಲ್ಲಿ ಕಂಕನಾಡಿ ಪೋಲಿಸರು ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದು, ಬಂಧತರಿಂದ ಕೃತ್ಯಕ್ಕೆ ಬಳಸಿದ ತಲವಾರು, ಚೂರಿ, ಮೋಟಾರ್ ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಲಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.


Spread the love