Spread the love
ಮಂಗಳೂರು: ಹಜ್ ಯಾತ್ರಿಕರಿಗೆ ಚುಚ್ಚು ಮದ್ದು ಶಿಬಿರ
ಮಂಗಳೂರು: ಕರ್ನಾಟಕ ರಾಜ್ಯ ಹಜ್ ಸಮಿತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಹಜ್ ನಿರ್ವಹಣಾ ಸಮಿತಿ ವತಿಯಿಂದ ಈ ವರ್ಷ ಹಜ್ ಯಾತ್ರೆಗೆ ತೆರಳುವ ದಕ್ಷಿಣ ಕನ್ನಡ ಜಿಲ್ಲೆಯ ಯಾತ್ರಿಕರಿಗೆ ಚುಚ್ಚು ಮದ್ದು ನೀಡುವ ಕಾರ್ಯಕ್ರಮ ಶನಿವಾರ ನಗರದ ಯನೆಪೋಯ ಶಾಲಾ ಆವರಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ರಾಜ್ಯ ಹಜ್ ಸಮಿತಿ ಸದಸ್ಯ ಸಯ್ಯದ್ ಅಶ್ರಫ್ ತಂಗಲ್, ಯನಪೋಯ ಅಬ್ದುಲ್ಲಾ ಕುನ್ನಿ, ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷರಾದ ನಾಸಿರ್ ಲಕಿಸ್ಟಾರ್, ಎಸ್ ಎಂ ರಶೀದ್ ಹಾಜಿ, ಹನೀಫ್ ಹಾಜಿ, ಪುತ್ತು ಬಾವಾ ಹಾಜಿ, ಡಾ. ಅಖ್ತರ್ , ರಫೀಕ್ ಮತ್ತಿತರರು ಉಪಸ್ಥಿತರಿದ್ದರು.
ಇಂದು ಒಟ್ಟು 1244 ಯಾತ್ರಿಕರಿಗೆ ಚುಚ್ಚು ಮದ್ದು ನೀಡಲಾಯಿತು.
Spread the love













