ಅಕ್ಟೋಬರ್ 14 -ನಗರಪಾಲಿಕೆ : ನೀರು ಸರಬರಾಜು – ಕುಂದು ಕೊರತೆಯ ಆಂದೋಲನ

Spread the love

ಅಕ್ಟೋಬರ್ 14 -ನಗರಪಾಲಿಕೆ : ನೀರು ಸರಬರಾಜು – ಕುಂದು ಕೊರತೆಯ ಆಂದೋಲನ

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ನೀರಿನ ಬಳಕೆದಾರರು ನೀರು ಸರಬರಾಜಿಗೆ ಸಂಬಂಧಪಟ್ಟ ಖಾತೆ ಬದಲಾವಣೆ, ಮಾಪಕ ದುರಸ್ಥಿ, ಹೊಸ ಮಾಪಕ ಅಳವಡಿಕೆ, ಹೊಸ ನೀರಿನ ಜೋಡಣೆ, ಜೋಡಣೆ ಕಡಿತಗೊಳಿಸುವುದು ಮತ್ತು ನೀರಿನ ಶುಲ್ಕಕ್ಕೆ ಸಂಬಂಧಪಟ್ಟ ಯಾವುದೇ ಅರ್ಜಿಗಳು/ದೂರುಗಳು ಸೂಕ್ತ ಸಮಯದಲ್ಲಿ ಪರಿಹಾರವಾಗದೇ ಬಾಕಿ ಉಳಿದಿದ್ದಲ್ಲಿ ಅಂತಹ ಬಳಕೆದಾರರು ಅಕ್ಟೋಬರ್ 14 ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯ ಅವಧಿಯಲ್ಲಿ ಸಂಬಂಧಪಟ್ಟ ದಾಖಲೆಗಳೊಂದಿಗೆ ನಗರ ಪಾಲಿಕೆಗೆ ಹಾಜರಾಗಿ ಇತ್ಯಾರ್ಥ ಪಡಿಸಿಕೊಳ್ಳಬೇಕು.
ನಗರಪಾಲಿಕೆಯಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಕ್ಟೋಬರ್ 14 ರಂದು ಸಂಬಂಧಪಟ್ಟ ಅಧಿಕಾರಿ ಸಿಬ್ಬಂಧಿಗಳು ಹಾಜರಿದ್ದು ಬಾಕಿ ಅರ್ಜಿಗಳನ್ನು ತ್ವರಿತ ಗತಿಯಲ್ಲಿ ಸ್ಥಳದಲ್ಲೆ ವಿಲೇ ಮಾಡಲು ಕ್ರಮ ವಹಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯುವಂತೆ ಹಾಗೂ ಸಕಾಲದಲ್ಲಿ ಬಾಕಿ ಶುಲ್ಕ ಪಾವತಿಸಿ ನಗರಪಾಲಿಕೆಯೊಂದಿಗೆ ಸಹಕರಿಸಲು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.


Spread the love