ಬಸ್ – ಕಾರು ನಡುವೆ ಅಪಘಾತ; ಇಬ್ಬರು ಮೃತ್ಯು

Spread the love

ಬಸ್ – ಕಾರು ನಡುವೆ ಅಪಘಾತ; ಇಬ್ಬರು ಮೃತ್ಯು

ಸುಳ್ಯ: ಬಸ್ ಮತ್ತು ಕಾರು ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಅಡ್ಕಾರು ಬಳಿ ಶುಕ್ರವಾರ ಸಂಜೆ ನಡೆದಿದೆ.

ಮೃತಪಟ್ಟವರನ್ನು ಕೆದಿಲ ನಿವಾಸಿ ಸಾದಿಕ್ ಮತ್ತು ಕಬಕ ನಿವಾಸಿ ಮಜೀದ್ ಎಂದು ಗುರುತಿಸಲಾಗಿದೆ. ನಾಲ್ವರಿಗೆ   ಸಲ್ಮಾನ್ ಫಾರಿಸ್ (10),  ಅಬುಬಕ್ಕರ್ (40), ಮಹಮ್ಮದ್ (14) ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಬಂಧಿಕರ ಮನೆಗೆ ತೆರಳಿ ಹಿಂದಿರುಗುವ ವೇಳೆ ಕೇರಳ ಬಸ್ ಮತ್ತು ಇವರ ಇನ್ನೋವಾ ಕಾರು ನಡುವೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಇನೋವಾ (ಕೆಎ 22- ಎನ್.7974) ಸುಳ್ಯ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿತ್ತು. ಬಸ್ (ಕೆಎಲ್ 15-ಎ-1747) ಕಾಸರಗೋಡಿನಿಂದ ಸುಳ್ಯದ ಕಡೆಗೆ ಬರುತಿತ್ತು.

ಅಪಘಾತದ ತೀವ್ರತೆಗೆ ಇನೋವಾ ನುಜ್ಜುಗುಜ್ಜಾಗಿದ್ದು, ಬಸ್ ಸಮೀಪದ ತೋಟದತ್ತ ಸಾಗಿತ್ತು. ಸ್ಥಳೀಯರು ಪ್ರಯಾಸದಿಂದ ಮೃತದೇಹವನ್ನು ಮತ್ತು ಗಾಯಾಳುಗಳನ್ನು ಹೊರತೆಗೆದರು.

ಮೃತದೇಹಗಳನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಅಂಬ್ಯುಲೆನ್ಸ್‌ನಲ್ಲಿ ತರಲಾಗಿದೆ. ಇನೋವಾದಲ್ಲಿದ್ದ ಬಾಲಕಿ ಸಹಿತ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸುಳ್ಯದ ವಿದ್ಯಾಸಾಗರ ರಾವ್ ಅವರು ತನ್ನ ಕಾರಿನಲ್ಲಿ ಸುಳ್ಯ ಕೆ.ವಿ.ಜಿ.ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.


Spread the love