ಅಪರೇಶನ್ ಕಮಲ; ಬಿಜೆಪಿಯವರು ಟೆಸ್ಟ್ ಮ್ಯಾಚ್ ಆಡಿದ್ರೆ ನಾವು ಒನ್ ಡೆಯಲ್ಲಿ ಮುಗಿಸುತ್ತೇವೆ ; ಸಚಿವ ಖಾದರ್

Spread the love

ಅಪರೇಶನ್ ಕಮಲ; ಬಿಜೆಪಿಯವರು ಟೆಸ್ಟ್ ಮ್ಯಾಚ್ ಆಡಿದ್ರೆ ನಾವು ಒನ್ ಡೆಯಲ್ಲಿ ಮುಗಿಸುತ್ತೇವೆ ; ಸಚಿವ ಖಾದರ್

ಮಂಗಳೂರು: ಬಿಜೆಪಿಯವರು ಟೆಸ್ಟ್ ಮ್ಯಾಚ್ ಆಡಿದ್ರೆ ನಾವು ಒನ್ ಡೆಯಲ್ಲಿ ಮುಗಿಸುತ್ತೇವೆ ಕುಮಾರಸ್ವಾಮಿಯವರ ಸರಕಾರ ಸುಭದ್ರವಾಗಿದೆ ಬಿಜೆಪಿಯವರು ಸರಕಾರ ಬೀಳಿಸುವ ಪ್ರಯತ್ನದಲ್ಲಿ ಸಫಲವಾಗುವುದಿಲ್ಲ ಎಂದು ರಾಜ್ಯದ ನಗರಾಭಿವೃದ್ಧಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ.

ಬಿಜೆಪಿಯವರು ಆಪರೇಷನ್ ಕಮಲದ ಮೂಲಕ ಸರ್ಕಾರ ಬೀಳಿಸುವ ಕೆಲಸಕ್ಕೆ ಕೈ ಹಾಕಿರುವ ಕುರಿತು ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯವರಿಗೆ ಬಿಬಿಎಂಪಿಯಲ್ಲಿ ಕನಿಷ್ಠ 4 ಮಂದಿ ಕಾರ್ಪೋರೇಟರ್ ಗಳನ್ನು ಹಿಡಿಯಲು ಆಗದವರು ಇನ್ನು 15 ಶಾಸಕರನ್ನು ಹಿಡಿಯಲು ಸಾಧ್ಯನಾ ಎಂದು ಪ್ರಶ್ನಿಸಿದರು.

ಅತೃಪ್ತರಿಗೆ ಸಚಿವ ಸ್ಥಾನ ಬಿಟ್ಟು ಕೊಡುವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ಪಕ್ಷ ನನಗೆ ಈಗಾಗಲೇ ಹೆಸರು ಅಧಿಕಾರ ಎಲ್ಲವನ್ನೂ ನೀಡಿದೆ ಆದ್ದರಿಂದ ಯಾವತ್ತೂ ಪಕ್ಷಕ್ಕಾಗಿ ಯಾವ ರೀತಿಯ ತ್ಯಾಗಕ್ಕೂ ಸಿದ್ದನಿದ್ದೇನೆ. ಪಕ್ಷ ಬಯಸಿದರೆ ಅಧಿಕಾರ ಬಿಟ್ಟು ಕೊಡಲು ಕೂಡ ಸಿದ್ದನಿದ್ದೇನೆ ಅಲ್ಲದೆ ಸಚಿವ ಸ್ಥಾನ ಬಿಟ್ಟು ಶಾಸಕನಾಗಿ ಕೆಲಸ ಮಾಡಲು ಕೂಡ ತಯಾರಾಗಿದ್ದೇನೆ ಎಂದರು.

ಬಿಜೆಪಿ ಪಕ್ಷ ಸೇರಲು ತಮಗೇನಾದರೂ ಆಫರ್ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನನಗೆ ಈ ವರೆಗೆ ಯಾವುದೇ ಆಫರ್ ಬಿಜೆಪಿ ಪಕ್ಷದಿಂದ ಬಂದಿಲ್ಲ. ನನ್ನ ಕುತ್ತಿಗೆ ಹರಿದು ನೇತು ಹಾಕಿದ್ರು ಕೂಡ ನಾನು ಕಾಂಗ್ರೆಸ್ ಅಂತಾನೇ ಹೇಳೊದು. ಕಾಂಗ್ರೆಸ್ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ಸಂಪೂರ್ಣ ಸುಭದ್ರವಾಗಿದೆ ಯಾವುದೇ ರೀತಿಯ ಅಪಾಯ ಇಲ್ಲ ಎಂದರು.


Spread the love