ಅಪ್ರಬುದ್ಧ ಪ್ರಧಾನಿ ನರೇಂದ್ರ ಮೋದಿ: ನಗರ ಕಾಂಗ್ರೆಸ್ ಪಕ್ಷ

Spread the love

ಅಪ್ರಬುದ್ಧ ಪ್ರಧಾನಿ ನರೇಂದ್ರ ಮೋದಿ: ನಗರ ಕಾಂಗ್ರೆಸ್ ಪಕ್ಷ

ಮಂಗಳೂರು: ಅಪ್ರಬುದ್ಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 1000 ಮತ್ತು 500 ರೂಪಾಯಿಯನ್ನು ಪೂರ್ವತಯಾರಿ ಇಲ್ಲದೆ ಏಕಾಏಕಿ ರದ್ದುಮಾಡಿ ಜನಸಾಮಾನ್ಯರನ್ನು ಬೀದಿಗೆ ತಳ್ಳಿದೆ ಎಂದು ಮಂಗಳೂರು ನಗರ ಕಾಂಗ್ರೆಸ್ ಪಕ್ಷ ಆಕ್ರೋಶ ವ್ಯಕ್ತಪಡಿಸಿತು.

akrosh-divas-mangalore

ಆಕ್ರೋಷ ದಿವಸವನ್ನು ಉದ್ದೇಶಿ ಮಾತನಾಡಿದ ಕಾಂಗ್ರೆಸ್ ನಾಯಕರು ಮೋದಿ ವಿರುದ್ಧ ಪ್ರತಿಭಟನೆ ಮಾಡಿ ಆಡಳಿತದ ಅಧಿಕಾರವಿಲ್ಲದೆ ಬೇಕಾಬಿಟ್ಟಿ ಮಾಡಿದ ಮೋದಿಯನ್ನು ದೂಷಿಸಿದರು.

ಮಂಗಳೂರು ಮಹಾಪೌರ ಹರಿನಾಥ ಅವರು ಲಾಲ್ ಬಾಗ್ ಗಾಂಧಿ ವೃತ್ತದಲ್ಲಿ ಮಹಾತ್ಮಾ ಗಾಂಧಿ ಅವರ ಪ್ರತಿಮೆಗೆ ಮಾಲೆಹಾಕುವ ಮೂಲಕ ಬೃಹತ್ ಪ್ರತಿಭಟನೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಸುರೇಶ್ ಬಲ್ಲಾಳ್, ಡಾ.ಬಿ.ಜಿ.ಸುವರ್ಣ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶಾಸ್ ಕುಮಾರ್ ದಾಸ್, ಜಿಲ್ಲಾ ವಕ್ತಾರ ಎ.ಸಿ.ವಿನಯ ರಾಜ್, ಶಶಿರಾಜ ಅಂಬಟ್ಟಿ, ಮಾಜಿ ಮೇಯರ್ ಅಬ್ದುಲ್ ಅಜೀಜ್, ಕೆ.ಎಸ್.ಆರ್.ಟಿ ಸಿ ನಿರ್ದೇಶಕ ಟಿ.ಕೆ.ಸುಧೀರ್,ಯುವ ಮುಖಂಡ ರಮಾನಂದ ಪೂಜಾರಿ, ವರುಣ್ ಅಂಬಟಿ, ಕಿಸಾನ್ ಘಟಕ ಅಧ್ಯಕ್ಷ ನೀರಾಜ್ ಪೌಲ್, ಗೋಪಾಲ ಶೆಟ್ಟಿ, ಕಾರ್ಪೊರೇಟರ್ ಅಶೋಕ್ ಡಿ.ಕೆ, ಕೇಶವ ಮರೋಳಿ, ನಾಗವೇಣಿ, ಸಬಿತ್ ಮಿಸ್ಕಿತ್, ಉದಯ ಕುಂದರ್, ಸೇಷ ಬಲ್ಲಾಳ್ ಬಾಗ್, ರಜನೀಶ್ ಕಾಪಿಕಾಡ್, ಪ್ರಕಾಶ್ ಬಿ.ಸಾಲ್ಯಾನ್, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಾ ಯುಸುಪ್ ಉಚಿಲ್, ಟಿ.ಸಿ.ಗಣೇಶ್, ಸುರೇಶ್ ಕದ್ರಿ, ಅಬೂಬಕರ್ ಕುದ್ರೋಳಿ, ಜೋಸೆಫ್ ಲೋಬೊ, ಬ್ಲಾಕ್ ಪ್ರಧಾನ ಕಾರ್ಯದರ್ಶಿಗಳಾದ ಅರಿಫ್, ಮರಿಯಮ್ಮ ಥೋಮಸ್, ಹಾಗೂ ಕಾರ್ಯಕರ್ತರಾದ ಪ್ರಥ್ವಿ, ಚೇತನ್ ಅಶೋಕ್ ನಗರ, ರವಿ ಹೊಯ್ಗೆಬೈಲ್, ನೌಶದ್, ಬಿಕರ್ನ ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love