ಅಭಿವೃದ್ಧಿಯತ್ತ ನಮ್ಮ ರಾಜ್ಯ- ಶಾಸಕ  ವೇದವ್ಯಾಸ ಕಾಮತ್

Spread the love

ಅಭಿವೃದ್ಧಿಯತ್ತ ನಮ್ಮ ರಾಜ್ಯ- ಶಾಸಕ  ವೇದವ್ಯಾಸ ಕಾಮತ್

ಮಂಗಳೂರು: ಸದನದಲ್ಲಿ ವಿಶ್ವಾಸಮತ ಗೆದ್ದು ರಾಜ್ಯದಲ್ಲಿ ಸುಭದ್ರ ಸರಕಾರಕ್ಕೆ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಚಾಲನೆ ನೀಡಿದ್ದಾರೆ. ಮುಂದಿರುವ ಮೂರು ವರ್ಷ ಹತ್ತು ತಿಂಗಳ ಅವಧಿಯಲ್ಲಿ ರಾಜ್ಯ ಅಭಿವೃದ್ಧಿಯಲ್ಲಿ ನಾಗಲೋಟ ಪಡೆಯಲಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಲೇ ಮಾನ್ಯ ಯಡಿಯೂರಪ್ಪನವರು ನೇಕಾರರ ನೂರು ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದ್ದಾರೆ. ಪ್ರಧಾನಿ ಮೋದಿಜಿಯವರ ಕಿಸಾನ್ ಸಮ್ಮಾನ್ ನಿಧಿಗೆ ರಾಜ್ಯದಿಂದಲೂ ನಾಲ್ಕು ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಮೊದಲ ದಿನವೇ ರೈತರ, ನೇಕಾರರ ಮೊಗದಲ್ಲಿ ಹರ್ಷದ ವಾತಾವರಣ ಮೂಡಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವರ್ಗದ ಜನರನ್ನು ಅಭಿವೃದ್ಧಿಯತ್ತ ಕರೆದುಕೊಂಡು ಹೋಗುವ ಮೂಲಕ ಯಡಿಯೂರಪ್ಪನವರು ಮಾದರಿ ಮೇಲ್ಪಂಕ್ತಿಯನ್ನು ಹಾಕಿಕೊಡಲಿದ್ದಾರೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.


Spread the love