ಆಚಾರವಿಲ್ಲದೆ ವಿಚಾರವಿಲ್ಲದೆ ಪರರ ದೂಷಿಸುವ ಬಿಜೆಪಿ : ಕಾಂಗ್ರೆಸ್

Spread the love

ಆಚಾರವಿಲ್ಲದೆ ವಿಚಾರವಿಲ್ಲದೆ ಪರರ ದೂಷಿಸುವ ಬಿಜೆಪಿ : ಕಾಂಗ್ರೆಸ್

ಉಡುಪಿ: ಸದಾ ಸುಳ್ಳು ಹೇಳಿ ಸುಳ್ಳನ್ನೇ ಸಾಬೀತುಪಡಿಸುವ ಕಾರ್ಯತಂತ್ರದಲ್ಲಿ ಮುಂದುವರಿಯುತ್ತಿರುವ ಬಿಜೆಪಿ ಪ್ರಯತ್ನ ಯಶಸ್ವಿಯಾಗದು. ಸಚಿವರಾದ ಪ್ರಮೋದ್ ಮಧ್ವರಾಜ್‍ರವರು ಕ್ಷೇತ್ರದ ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಹೇಗೆ ನಿರ್ವಹಿಸುತ್ತಿದ್ದಾರೆ ಎಂದು ಮತದಾರರ ಮನದಾಳದಲ್ಲಿದೆ.

ರಾಮ ಕೃಷ್ಣ ವಾಲ್ಮೀಕಿ ಮಾಂಸಹಾರಿಗಳು ಎಂದು ಹೇಳಿರುವುದನ್ನು ದೊಡ್ಡ ವಿಷಯವನ್ನಾಗಿ ಮಾಡಿಕೊಂಡು ಜನರ ಮನದಲ್ಲಿ ಬಿಜೆಪಿಯವರು ಮಾತ್ರ ದೈವ ಭಕ್ತರು ಎಂದು ಬಿಂಬಿಸುವ ಕೆಲಸದಲ್ಲಿ ಬಿಜೆಪಿ ತೊಡಗಿದೆ. 10,000 ವರ್ಷದ ಹಿಂದಿನ ವಿಚಾರದ ಬಗ್ಗೆ ಈಗ ಏಕೆ ಹೇಳಿಕೆ ನೀಡಿದ್ದಾರೆ ಎಂದು ಪ್ರಶ್ನಿಸುವ ಮಟ್ಟಾರು ರತ್ನಾಕರ ಹೆಗ್ಡೆಯವರೇ ನಾವು ಪ್ರಮೋದ್ ಮಧ್ವರಾಜ್‍ರ ಜೊತೆ ಊಟ ಮಾಡಿದ್ದೇವೆ. ಶ್ರೀರಾಮ ಕೃಷ್ಣರ ಜೊತೆ ಪ್ರಮೋದ್ ಕುಳಿತು ಊಟ ಮಾಡಿದ್ದಾರೆಯೇ ಎಂಬ ಪ್ರಶ್ನೆಯಾದರೆ ಚೈತ್ರ ಆತ್ಮಹತ್ಯೆ ಪ್ರಕರಣದ ಕೆಲವರನ್ನು ಮಾನ್ಯ ಸಚಿವರು ದೂರವಾಣಿ ಮೂಲಕ ಪೋಲಿಸ್ ಅಧಿಕಾರಿಗಳನ್ನು ಸಂಪರ್ಕಿಸಿ 5 ನಿಮಿಷದಲ್ಲಿ ಬಿಡುಗಡೆಗೊಳಿಸಿದ ಮಾಹಿತಿ ಇದೆ ಎನ್ನುದಾದರೆ ಎಲ್ಲಿ ದೂರವಾಣಿ ಮಾಡಿದರು? ಅವರು ಫೋನ್ ಮಾಡುವಾಗ ಬಿಜೆಪಿಯವರು ಅವರ ಜೊತೆ ಕುಳಿತಿದ್ದರೇ? ಬಿಜೆಪಿಯವರು ತಾವು ಕಂಡಂತೆ ಮಾತನಾಡುವುದು ಸತ್ಯವಾದರೆ ಸತ್ಯವನ್ನು ಸಾಬೀತುಪಡಿಸಲಿ.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಯಾವುದೇ ಧರ್ಮದ ಪೂಜಿಸಲ್ಪಡುವ ದೇವರನ್ನು ಬಳಸಿಕೊಂಡು ಅಥವಾ ದೂರಿಕೊಂಡು ಮತ ಗಿಟ್ಟಿಸುವ ಪ್ರಯತ್ನ ಮಾಡುವುದಿಲ್ಲ. ದೈವ ಭಕ್ತರು ಸಾಕಷ್ಟು ಮಂದಿ ಕಾಂಗ್ರೆಸ್‍ನಲ್ಲಿಯೂ ಇದ್ದಾರೆ ಎನ್ನುವುದನ್ನು ಬಿಜೆಪಿ ಅರಿತುಕೊಳ್ಳಲಿ. ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಬ್ರಾಹ್ಮಣರು ಮಾಂಸ ತಿನ್ನಬಾರದೆಂದು ಹೇಳಿದ್ದಾರೆ, ರಘುಪತಿ ಭಟ್ಟರೇ ನೀವು ಬ್ರಾಹ್ಮಣರಲ್ಲವೇ ? ಚೈತ್ರಾ ಸಾವಿನ ಬಗ್ಗೆ ಮಾತನಾಡುವ ಬಿಜೆಪಿಯ ಮುಖಂಡರು ಮಾಜಿ ಶಾಸಕರಾದ ರಘುಪತಿ ಭಟ್‍ರವರ ಪತ್ನಿಯಾದ ಪದ್ಮಪ್ರಿಯ ಅವರ ಸಾವಿನ ಬಗ್ಗೆ ಏಕೆ ಧ್ವನಿ ಎತ್ತಿಲ್ಲ ?

ಕುಲ ಕುಲ ಕುಲ ಎಂದು ಹೊಡೆದಾಡದಿರಿರಿ ಎಂದು ಜನರನ್ನು ಮನವೊಲಿಸುವ ಪ್ರಯತ್ನ ಮಾಡಿರುವುದು ಅಂದು ಭಕ್ತ ಕನಕದಾಸರಲ್ಲವೇ? ಅದೇ ಭಕ್ತ ಕನಕದಾಸರ ಭಾವನೆಗಳನ್ನು ತಿಳಿದ ದಿವಂಗತ ಮಲ್ಪೆ ಮಧ್ವರಾಜ್‍ರವರು ಉಡುಪಿಯ ರಥಬೀದಿಯಲ್ಲಿ ಕನಕದಾಸರ ವಿಗ್ರಹವನ್ನು ಸ್ಥಾಪಿಸಿದ್ದು. ಪ್ರತೀ ದಿನ ಕನಕದಾಸರಿಗೆ ಅಂದು ಪೂಜೆ ಪುನಸ್ಕಾರಗಳು ಆಗುವಂತೆ ದಿವಂಗತ ಕೊಡಂಚರವರಿಂದ ನಡೆಸುವಂತೆ ಮಾಡಿರುವುದು ಮಧ್ವರಾಜರು. ಸರ್ವ ಧರ್ಮದ ಜನರನ್ನು ಎಲ್ಲರೂ ಒಂದೇ ಎಂದು ಕಾಣುವ ಕನಕದಾಸರ ವಿಗ್ರಹವನ್ನು ಮಧ್ವರಾಜರು ಸ್ಥಾಪಿಸಿದರು. ಕನಕನಿಗೆ ಒಲಿದ ಶ್ರೀ ಕೃಷ್ಣನ ನಾಡಿನಲ್ಲಿ ಕನಕನ ಆದರ್ಶವನ್ನು ಮತ್ತು ಶ್ರೀ ಕೃಷ್ಣನ ಸಂದೇಶವನ್ನು ಸಚಿವರು ಪಾಲಿಸುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯವರನ್ನು ದಾಸರ ಕೀರ್ತನೆಯಂತೆ ಸಂಬೋದಿಸಬೇಕಾಗುತ್ತದೆ. ಆಚಾರವಿಲ್ಲದೆ ವಿಚಾರವಿಲ್ಲದ ನಾಲಿಗೆ ಪರರನ್ನು ದೂಷಿಸುವ ನಿನ್ನ ನೀಚ ಬುದ್ದಿಯ ಬಿಡು ಎಂದಂತೆ ದೂಷಿಸುವ ಕೆಲಸವನ್ನು ಇನ್ನಾದರೂ ಬಿಜೆಪಿಯ ಮುಖಂಡರು ನಿಲ್ಲಿಸಲಿ ಎಂದು ಕಾಂಗ್ರೆಸ್ ಮುಖಂಡ ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಗಣೇಶ್ ನೆರ್ಗಿ, ಸದಾಶಿವ ಕೋಟ್ಯಾನ್ ಕಟ್ಟೆಗುಡ್ಡೆ, ಹಸನ್ ಸಾಹೇಬ್ ಅಜ್ಜರಕಾಡು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love