ಆಳ್ವಾಸ್‍ನಲ್ಲಿ ಸಿಎ ಫೌಂಡೆಶನ್, ಐಪಿಸಿಯ ಒರಿಯೆಂಟೆಶನ್

Spread the love

ಆಳ್ವಾಸ್‍ನಲ್ಲಿ ಸಿಎ ಫೌಂಡೆಶನ್, ಐಪಿಸಿಯ ಒರಿಯೆಂಟೆಶನ್

ಮೂಡುಬಿದಿರೆ: ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿಯನ್ನು ಇಟ್ಟುಕೊಂಡು ಕಾರ್ಯಪ್ರವೃತ್ತರಾದಾಗ ಭವಿಷ್ಯವನ್ನು ಸಂತೋಷದಿಂದ ಕಳೆಯಬಹುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷ ಡಾ. ಎಂ ಮೋಹನ್ ಆಳ್ವ ತಿಳಿಸಿದರು.

ಅವರು ಆಳ್ವಾಸ್ ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸಿಎ ಫೌಂಡೆಶನ್ ಮತ್ತು ಐಪಿಸಿಯ ಒರಿಯೆಂಟೆಶನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾಭ್ಯಾಸದಲ್ಲಿ ಲಾಭ ನಷ್ಟವನ್ನು ನೋಡದೆ ಫಲಿತಾಂಶದ ಕಡೆಗೆ ಗಮನವಿರಬೇಕು. ಅಲ್ಲದೆ ನಮಗೆ ಅಗತ್ಯ ಇರುವ ವಿಷಯಗಳನ್ನು ಅಧ್ಯಯನ ಮಾಡುವುದು ತುಂಬಾ ಫಲಪ್ರದವಾಗುತ್ತದೆ. ಪ್ರತಿಯೊಬ್ಬರು ಬದುಕುವ ರೀತಿ ವಿಭಿನ್ನ, ಅವರ ರೀತಿ ನೀತಿಯನ್ನು ಮೌಲ್ಯಮಾಪನ ಮಾಡುವ ಚಾತುರ್ಯತೆ ಇರಬೇಕು. ಆಗ ಮಾತ್ರ ಸಾಮಾನ್ಯ ಮಕ್ಕಳಿಗಿಂತ ಭಿನ್ನವಾಗಿ ಸಾಧನೆ ಮಾಡಲು ಸಾದ್ಯ ಎಂದು ಅಭಿಪ್ರಾಯ ಪಟ್ಟರು.

ಸಿಕಾಸ್ ಸಂಸ್ಥೆಯ ಅಧ್ಯಕ್ಷ ಸಿಎ ಪ್ರಸನ್ನ ಶೆಣೈ ಎಂ. ಮುಖ್ಯ ಅತಿಥಿಯಾಗಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟರೆ ಮುಂದೆ ಸುಖವಾಗಿರಬಹುದು. ಅಲ್ಲದೆ ನಾವು ಕಲಿತ ವಿದ್ಯಾಸಂಸ್ಥೆಗೆ ಚಿರಋಣಿಯಾಗಿರಬೇಕು ಎಂದು ಹೇಳಿದರು.

ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಕುರಿಯನ್, ಆಡಳಿತ ಅಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ, ಸಿಕಾಸ್‍ನ ಸದಸ್ಯ ಸಿಎ ಅನ್ವೇಷ್ ಶೆಟ್ಟಿ ಉಪಸ್ಥಿತರಿದ್ದರು.


Spread the love