Spread the love
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಕೋರ್ ಕಮಿಟಿ ಸದಸ್ಯರ ನೇಮಕ
ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕೋರ್ ಕಮಿಟಿ ಸದಸ್ಯರ ನೇಮಕಾತಿ ಕುರಿತು ನಡೆದ ಮಾಸಿಕ ಸಭೆಯಲ್ಲಿ ಚರ್ಚೆ ನಡೆಸಿ ಸದಸ್ಯರ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಈ ಸಭೆ ದಿನಾಂಕ 05.09.2025ರಂದು, ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಶಾಸಕರಾದ ಐವನ್ ಡಿಸೋಜ ಅವರ ಉಪಸ್ಥಿತಿಯಲ್ಲಿ ನಡೆದಿತ್ತು.
ಸಭೆಯ ನಿರ್ಣಯದಂತೆ ಕೆಳಕಂಡವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕೋರ್ ಕಮಿಟಿ ಸದಸ್ಯರನ್ನಾಗಿ ನೇಮಿಸಲಾಗಿದೆ:
- ಅಶೋಕ ಕುಮಾರ್ ಕೊಡವೂರು – ಅಧ್ಯಕ್ಷರು, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ
- ಪ್ರತಾಪಚಂದ್ರ ಶೆಟ್ಟಿ – ಮಾಜಿ ಶಾಸಕರು, ವಿಧಾನ ಪರಿಷತ್
- ವಿನಯ ಕುಮಾರ್ ಸೊರಕೆ – ಮಾಜಿ ಸಚಿವರು, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು
- ಜಯಪ್ರಕಾಶ್ ಹೆಗ್ಡೆ – ಮಾಜಿ ಸಂಸದರು, ಮಾಜಿ ಸಚಿವರು
- ಎಂ.ಎ. ಗಫೂರ್ – ಉಪಾಧ್ಯಕ್ಷರು, ಕೆಪಿಸಿಸಿ
- ಗೋಪಾಲ್ ಪೂಜಾರಿ – ಮಾಜಿ ಶಾಸಕರು
- ದಿನೇಶ್ ಹೆಗ್ಡೆ – 2023ರ ವಿಧಾನಸಭಾ ಅಭ್ಯರ್ಥಿ
- ಪ್ರಸಾದ್ ರಾಜ್ ಕಾಂಚನ್ – 2023ರ ವಿಧಾನಸಭಾ ಅಭ್ಯರ್ಥಿ
- ಮುನಿಯಲ್ ಉದಯ ಕುಮಾರ್ ಶೆಟ್ಟಿ – 2023ರ ವಿಧಾನಸಭಾ ಅಭ್ಯರ್ಥಿ
- ರಾಜು ಪೂಜಾರಿ – ದ.ಕ. ಹಾಗೂ ಉಡುಪಿ ವಿಧಾನ ಪರಿಷತ್ ಉಪಚುನಾವಣೆಯ ಅಭ್ಯರ್ಥಿ
- ಕಿಶನ್ ಹೆಗ್ಡೆ – ಕಾರ್ಯಾಧ್ಯಕ್ಷರು, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ
ಈ ನೂತನವಾಗಿ ನೇಮಕಗೊಂಡ ಕೋರ್ ಕಮಿಟಿಯ ಮಾರ್ಗದರ್ಶನದಲ್ಲಿ: ಪಕ್ಷದ ಸಂಘಟನೆ ಬಲಪಡಿಸುವುದು. ಸರ್ಕಾರದಿಂದ ಮಾಡುವ ನಾಮ ನಿರ್ದೇಶನ ಕುರಿತು ಚರ್ಚೆ, ಜಿಲ್ಲೆಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದು ಇವುಗಳನ್ನು ಕೈಗೊಳ್ಳಲು ನಿರ್ಧಾರಿಸಲಾಗಿದೆ.
Spread the love
Voters are minority and Dalits…leadership
Some one else. How many these leaders will in mla or mp elections to Congress?