ಉಡುಪಿ : ದಲಿತ ಯುವತಿಗೆ ಹಲ್ಲೆ ಜಾತಿನಿಂದನೆ ಪ್ರಕರಣ- ಆರೋಪಿ ಬಂಧನ – ಎಸ್ಪಿ ಹರಿರಾಂ ಶಂಕರ್

Spread the love

ಉಡುಪಿ : ದಲಿತ ಯುವತಿಗೆ ಹಲ್ಲೆ ಜಾತಿನಿಂದನೆ ಪ್ರಕರಣ- ಆರೋಪಿ ಬಂಧನ – ಎಸ್ಪಿ ಹರಿರಾಂ ಶಂಕರ್

ಉಡುಪಿ: ಕುಂದಾಪುರ ಮಾವಿನಕಟ್ಟೆಯ ಮೆಡಿಕಲ್ ಶಾಪ್ ನಲ್ಲಿ ದಲಿತ ಯುವತಿಗೆ ಹಲ್ಲೆ ನಡೆಸಿ ಜಾತಿನಿಂದನೆ ಮಾಡಿದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ ಎಂದು ಉಡುಪಿ ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಘಟನಾ ಸ್ಥಳಕ್ಕೆ ನಿನ್ನೆಯೇ ಹೋಗಿ ನೊಂದ ಯುವತಿಯನ್ನು ಭೇಟಿ ಮಾಡಿದ್ದೇನೆ. ಮೆಡಿಕಲ್ ಶಾಪ್ನ ಯುವತಿಗೆ ಯಾಸ್ಮಿನ್ ಎಂಬಾಕೆ ಜಾತಿನಿಂದನೆ ಮಾಡಿ,ಹಲ್ಲೆ ಮಾಡಿದ್ದಾಳೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ. ಮುಂದೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹರಿರಾಂ ಶಂಕರ್ ಹೇಳಿದ್ದಾರೆ.

ಸೋಮವಾರ ಮಧ್ಯಾಹ್ನ 11 ಗಂಟೆಯ ಸುಮಾರಿಗೆ ಯಾಸ್ಮಿನ್ ಎನ್ನುವ ಮಹಿಳೆ ಮೆಡಿಕಲ್ ಅಂಗಡಿಗೆ ಖರೀದಿಗೆಂದು ಬಂದಿದ್ದಾರೆ. ಔಷಧಿ ಖರೀದಿ ಮಾಡಿದ ಬಳಿಕ ಆಕೆ ₹500 ನೋಟು ನೀಡಿದ್ದಾರೆ. ಆಗ ಅಂಗಡಿಯಲ್ಲಿ ಇದ್ದ ಲಕ್ಷ್ಮೀ ಎಂಬ ಯುವತಿ ಚಿಲ್ಲರೆ ನೀಡುವಂತೆ ವಿನಂತಿಸಿದ್ದಾರೆ. ಗ್ರಾಹಕಿ ತನ್ನಲ್ಲಿ ಚಿಲ್ಲರೆ ಇಲ್ಲ, ನೀವೆ ನೀಡಬೇಕು ಎಂದಾಗ ಯುವತಿ ಆನ್ಲೈನ್ ಮೂಲಕವೂ ಸಂದಾಯ ಮಾಡಬಹುದು ಎಂದು ಹೇಳಿದ್ದಾರೆ. ಇದನ್ನು ಪ್ರಬಲವಾಗಿ ಆಕ್ಷೇಪಿಸಿದ ಗ್ರಾಹಕಿ ಏಕಾಏಕಿ ಯುವತಿಯ ಮೇಲೆ ಹರಿಹಾಯ್ದಿದ್ದಾರೆ, ಆಕೆಯ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು


Spread the love
Subscribe
Notify of

0 Comments
Inline Feedbacks
View all comments