ಉಳ್ಳಾಲ ಯುವಕನ ಮೇಲೆ ತಲವಾರು ದಾಳಿ

Spread the love

ಉಳ್ಳಾಲ ಯುವಕನ ಮೇಲೆ ತಲವಾರು ದಾಳಿ

ಮಂಗಳೂರು: ಯುವಕನೋರ್ವನು ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕಪ್ಪು ಪಲ್ಸರ್ ಬೈಕಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ತಲವಾರು ದಾಳಿ ನಡೆಸಿದ್ದು, ಗಾಯಗೊಂಡ ಯುವಕ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಶನಿವಾರ ಸಂಜೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರು ರಾಣಿಪುರದಲ್ಲಿ ನಡೆದಿದೆ.

ತಲವಾರು ದಾಳಿಗೊಳಗಾದ ಯುವಕನನ್ನು ಅಂಬ್ಲಮೊಗರು ಗ್ರಾಮದ ಕ್ವಾಟ್ರಗುತ್ತು ನಿವಾಸಿ ಚಿರಂಜೀವಿ(23) ಎಂದು ಗುರುತಿಸಲಾಗಿದೆ.

ಚಿರಂಜೀವಿ ಶನಿವಾರ ಸಂಜೆ ಕುತ್ತಾರಿನಿಂದ ಕ್ವಾಟ್ರಗುತ್ತುವಿನ ಮನೆ ಕಡೆ ತೆರಳುತ್ತಿದ್ದ ವೇಳೆ ಕಪ್ಪು ಪಲ್ಸರ್ ಬೈಕಲ್ಲಿ ಹಿಂಬಾಲಿಸಿ ಬಂದ ಮೂರು ಆಗಂತುಕರು ಚಿರಂಜೀವಿ ತಲೆಗೆ ತಲವಾರಿನಿಂದ ಕಡಿದು ಪರಾರಿಯಾಗಿದ್ದಾರೆ.

ತಲವಾರು ದಾಳಿಗೊಳಗಾದ ಚಿರಂಜೀವಿ ಕುಲಾಲ್ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಯಲ್ಲಿ ಅನೇಕ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love