ಎಲ್ಲಾ ಧರ್ಮಗಳ ಮುಕ್ತ ಅಧ್ಯಯನ ನಡೆಸಬೇಕಾದ ಅಗತ್ಯತೆ ಇದೆ: ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ

Spread the love

ಎಲ್ಲಾ ಧರ್ಮಗಳ ಮುಕ್ತ ಅಧ್ಯಯನ ನಡೆಸಬೇಕಾದ ಅಗತ್ಯತೆ ಇದೆ: ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ

ಮಂಗಳೂರು: ಭಾರತವು ಜಾತ್ಯತೀತ ದೇಶವಾಗಿದ್ದು, ಇಂದು ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ವಿಷಯಗಳೇ ಇರಬಾರದೆಂಬ ನಿಲುವುಗಳು ಕಂಡು ಬರುತ್ತಿರುವುದು ದುರದೃಷ್ಟಕರ. ಆದರೆ ಸಮಾಜದಲ್ಲಿ ಬದುಕಲು ಜಾತಿ ಉಪಜಾತಿಗಳಿಲ್ಲದೇ ಯಾವುದೇ ರೀತಿಯ ಸರಕಾರಿ ಸವಲತ್ತುಗಳನ್ನು ಪಡೆದುಕೊಳ್ಳಲಾಗದು ಎಂಬುದನ್ನು ಅರಿಯಬೇಕಾದ ಅನಿವಾರ್ಯತೆ ಇದೆ. ಎಲ್ಲ ಧರ್ಮಗಳ ನಡುವೆ ಬೆಳೆದ ನನಗೆ ಜಾತಿಯನ್ನು ಮೀರಿ ಬೆಳೆಯಲು ಸಾಧ್ಯವಾಯಿತು. ಕುರ್ ಆನ್, ಬೈಬಲ್, ಗೀತೆ ಸೇರಿದಂತೆ ಹಲವಾರು ಧರ್ಮಗ್ರಂಥಗಳನ್ನು ಓದಿದ ಕಾರಣಕ್ಕಾಗಿ ಮಾನವೀಯತೆ ಎಲ್ಲ ಧರ್ಮಗಳಲ್ಲಿ ಸಾರಲ್ಪಡುವ ಸಂದೇಶವೆಂಬುದನ್ನು ನಾನು ಅರಿತಿz್ದÉೀನೆ. ಹಾಗಾಗಿ ಎಲ್ಲ ಧರ್ಮಗಳನ್ನು ಕೂಡ ಮುಕ್ತವಾಗಿ ಅಧ್ಯಯನ ನಡೆಸಬೇಕಾದ ಅಗತ್ಯತೆ ಇಂದಿನ ಸಮಾಜಕ್ಕಿದೆ ಎಂದು ಹಿರಿಯಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ರವರು ನುಡಿದರು.

ಮಂಗಳೂರಿನ ಐ.ಎಂ.ಎ ಹಾಲ್ ನಲ್ಲಿ ‘ಪ್ರವಾದಿ ಮುಹಮ್ಮದ್(ಸ): ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ಶೀರ್ಷಿಕೆಯಡಿಯಲ್ಲಿ ಹಮ್ಮಿಕೊಳ್ಳಲಾದ ರಾಜ್ಯವ್ಯಾಪಿ ಸೀರತ್ ಅಭಿಯಾನದ ಪ್ರಯುಕ್ತ ಆಯೋಜಿಸಲಾಗಿದ್ದ ‘ಪ್ರವಾದಿ ಮುಹಮ್ಮದ್(ಸ): ನನ್ನ ದೃಷ್ಟಿಕೋನ’ ದಲ್ಲಿ ಎಂಬ ದಕ್ಷಿಣ ಕನ್ನಡ ಜಿ¯್ಲÁ ಶಿP್ಷÀಕರ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಅವರು ಮಾತನಾಡುತ್ತಿದ್ದರು.

ದಕ್ಷಿಣ ಕನ್ನಡ ಜಿ¯್ಲÁ ಶಿP್ಷÀಕರ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಚೇತನ್ ಕೊಪ್ಪ(ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಳಾಯಿಬೆಟ್ಟು)ರವರು ಪಡೆದುಕೊಂಡರು. ಇವರಿಗೆ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ರವರು ಬಹುಮಾನದ ಮೊತ್ತ 25,000 ನಗದು ಮತ್ತು ಪ್ರಮಾಣಪತ್ರವನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಪ್ರಥಮ ಬಹುಮಾನ ಪಡೆದ ಶಿP್ಷÀಕ ಚೇತನ್ ಕೊಪ್ಪ ರವರ ಪ್ರಬಂಧವನ್ನು ಕಿರು ರೂಪದಲ್ಲಿ ಸೀರತ್ ಅಭಿಯಾನದ ಸ್ವಾಗತ ಸಮಿತಿಯು ಪ್ರಸ್ತುತ ಪಡಿಸಿತು.

ದ್ವಿತೀಯ ಬಹುಮಾನ 15,000 ಸಾವಿರ ನಗದು ಮತ್ತು ಪ್ರಮಾಣ ಪತ್ರವನ್ನು ಶ್ರೀಮತಿ ಮಂಜುಳಾ ಐ.ಜಿ. (ಸರಕಾರಿ ಹೈಸ್ಕೂಲ್, 5ನೇ ಬ್ಲಾಕ್, ಕೃಷ್ಣಾಪುರ) ಹಾಗೂ ತೃತೀಯ ಬಹುಮಾನ 10,000 ನಗದು ಮತ್ತು ಪ್ರಮಾಣ ಪತ್ರವನ್ನು ಸುಲೈಮಾನ್ ಕೆ.,(ಸರಕಾರಿ ಪಿ.ಯು. ಕಾಲೇಜು, ಕುಂಬ್ರ, ಪುತ್ತೂರು)ರವರು ಪಡೆದುಕೊಂಡರು.

ಈ ಸಂದರ್ಭದಲ್ಲಿ ತಲಾ 2000 ನಗದು ಮತ್ತು ಪ್ರಮಾಣ ಪತ್ರವನ್ನು ಒಳಗೊಂಡ 11 ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು. ಶೈಲಜಾ (ಸೈಂಟ್ ಆ್ಯಗ್ನೆಸ್ ಪಿ.ಯು. ಕಾಲೇಜು, ಮಂಗಳೂರು),ಕನೀಝ್ ಪಕ್ಕಲಡ್ಕ(ಸ್ನೇಹ ಪಬ್ಲಿಕ್ ಸ್ಕೂಲ್ ಪಕ್ಕಲಡ್ಕ), ಲೀಲಾವತಿ ಯು.ಬಿ. (ಮೌಲಾನಾ ಆಝಾದ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಕುದ್ರೋಳಿ), ಪ್ರದೀಪ್ ಕೊೈಲ(ಸರಕಾರಿ ಪಿ.ಯು. ಕಾಲೇಜು, ಸುಳ್ಯ) ಸುಲೋಚನಾ ಕುಮಾರಿ ಬಿ.ಕೆ. (ಸರಕಾರಿ ಪಿಯು. ಕಾಲೇಜು, ಸಜಿಪ ಮೂಡ), ಅಸುಂತಾ ಮೀರಾ ಡಯಾಸ್(ಸರಕಾರಿ ಪಿ.ಯು. ಕಾಲೇಜು ಚೇಳ್ಯಾರು, ಮಂಗಳೂರು), ಎಂ.ಜಿ. ರೀಮ್(ಹಿರಾ ವಿಮೆನ್ಸ್, ಪಿ.ಯು. ಕಾಲೇಜು, ಬಬ್ಬುಕಟ್ಟೆ, ಮಂಗಳೂರು), ಸುಪ್ರೀತಾ, (ನೂರುಲ್ ಹುದಾ ಇಂಗ್ಲಿಷ್ ಮೀಡಿಯಂ ಸ್ಕೂಲ್, ಕಾಟಿಪಳ್ಳ), ಜಯಶ್ರೀ.(ಎಸ್.ಜಿ.ಎಂ. ಹೈಸ್ಕೂಲ್, ಬಡಕೋಡಿ, ಪುತ್ತೂರು), ನಿಶಾನಾ ಬೇಗಂ, (ಹಿರಾ ವಿಮೆನ್ಸ್, ಪಿ.ಯು. ಕಾಲೇಜು, ಬಬ್ಬುಕಟ್ಟೆ, ಮಂಗಳೂರು), ಮರಿಯಾ ಶರ್ಮಿಳಾ ರೊಸಾರಿಯೋ(ಕಾರ್ಮೆಲ್ ಗಲ್ರ್ಸ್ ಹೈಸ್ಕೂಲ್, ಮೊಡಂಕಾಪು)ರವರು ಸಮಾಧಾನಕರ ಬಹುಮಾನವನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಉದಯ್ ಕುಮಾರ್ ಇರ್ವತ್ತೂರುರವರು ಮಾತನಾಡುತ್ತಾ, ಇಂದು ಸಮಾಜದಲ್ಲಿ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿದ್ದು, ನಾವು ಏನನ್ನು ಮಾತನಾಡಬೇಕು ಏನನ್ನು ಮಾತನಾಡಬಾರದು ಎಂಬುದನ್ನು ಒತ್ತಡ ಪೂರ್ವಕವಾಗಿ ಹೇರಲಾಗುತ್ತಿರುವ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ. ನಮ್ಮ ಧರ್ಮವನ್ನು ಅನುಸರಿಸಿ ಬಾಳುವುದರ ಜೊತೆಗೆ ನಮ್ಮ ಸುತ್ತಮುತ್ತ ಇರುವ ಇತರ ಧರ್ಮೀಯರ ಸಂದೇಶಗಳನ್ನು ಅರಿತು ಬಾಳಲು ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ನಡೆಯಬೇಕಾದ ಅನಿವಾರ್ಯತೆ ಇದೆ ಎಂದವರು ಅಭಿಪ್ರಾಯಿಸಿದರು.

ಸೀರತ್ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕುಂಞÂ ಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.

ಪ್ರಥಮ ಬಹುಮಾನ ಪಡೆದ ಚೇತನ್ ಕೊಪ್ಪ ರವರು ತಮ್ಮ ಅನುಭವವನ್ನು ಈ ಸಂದರ್ಭದಲ್ಲಿ ಹಂಚಿಕೊಳ್ಳುತ್ತಾ, ಸಮಾಜದಲ್ಲಿ ಶಿP್ಷÀಕರ ಪಾತ್ರವು ಪ್ರಮುಖವಾಗಿದ್ದು ಶಿP್ಷÀಕರಿಗೆ ನಡೆಸಲಾದ ಈ ಪ್ರಬಂಧ ಸ್ಪರ್ಧೆಯು e್ಞÁನದ ಬೇರಿಗೆ ನೀಡಿದ ಒಂದು ಸವಾಲಾಗಿದೆ. ಇದರಿಂದ ಪಡೆದುಕೊಂಡ e್ಞÁನವು ಎಲೆಗಳಿಗೂ(ವಿದ್ಯಾರ್ಥಿಗಳಿಗೂ) ತಲುಪುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ದ.ಕ. ಜಿಲ್ಲಾ ಸೀರತ್ ಸಮಿತಿಯ ಅಧ್ಯಕ್ಷರಾದ ಡಾ.ಸಿ .ಪಿ ಹಬೀಬುರ್ರಹ್ಮಾನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಬ್ಯಾರೀಸ್ ವೆಲ್ಫೇರ್ ಫೋರಂ, ಅಬುಧಾಬಿಯ ಮುಹಮ್ಮದಾಲಿ ಉಚ್ಚಿಲ್, ಜಮಾಅತೆ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜ. ಕೆ ಎಂ. ಅಶ್ರಫ್, ಸ್ವಾಗತ ಸಮಿತಿಯ ಉಪಾಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್, ಜೊತೆ ಕಾರ್ಯದರ್ಶಿ ನಾಝಿಮ್, ಸದಸ್ಯರಾದ ಕೆ.ಎಂ. ಶರೀಫ್, ಮುಸ್ತಫಾ ಕೆಂಪಿ, ವೈ. ಮುಹಮ್ಮದ್ ಬ್ಯಾರಿ, ಅಮೀನ್ ಅಹ್ಸನ್, ಜಮಾಅತೆ ಇಸ್ಲಾಮೀ ಹಿಂದ್ ವಲಯ ಸಂಚಾಲಕ ಅಬ್ದುಸ್ಸಲಾಂ ಉಪ್ಪಿನಂಗಡಿ, ಮೌಲಾನಾ ಸಾಲಿಮ್ ನದ್ಬಿ, ಇಲ್ಯಾಸ್ ಇಸ್ಮಾಯೀಲ್, ಸನ್ಮಾರ್ಗ ವಾರಪತ್ರಿಕೆಯ ಸಂಪಾದಕ ಏ.ಕೆ.ಕುಕ್ಕಿಲ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಮುಹಮ್ಮದ್ ತುಂಬೆಯವರು ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವಿತ್ತರು. ಅಮಾನುಲ್ಲಾ ಖಾನ್ ತರೀಕೆರೆ ಸಹಕರಿಸಿದರು.


Spread the love