ಒಳಕಾಡು ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿ ಹೆಬ್ಬಾರ್ ಚುನಾವಣಾ ಕಚೇರಿ ಉದ್ಘಾಟನೆ

Spread the love

ಒಳಕಾಡು ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿ ಹೆಬ್ಬಾರ್ ಚುನಾವಣಾ ಕಚೇರಿ ಉದ್ಘಾಟನೆ

ಉಡುಪಿ: ಅಗಸ್ಟ್ 29 ರಂದು ನಡೆಯಲಿರುವ ಉಡುಪಿ ನಗರಸಭಾ ಚುನಾವಣೆಗೆ 30ನೇ ಒಳಕಾಡು ವಾರ್ಡಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಜ್ಯೋತಿ ಹೆಬ್ಬಾರ್ ಅವರ ಚುನಾವಣಾ ಕಚೇರಿಯನ್ನು ಮಂಗಳವಾರ ಪಿ.ಪಿ.ಸಿ ಕಾಲೇಜಿನ ಬಳಿ ಇರುವ ಸುಂದರಾಮ್ ರೆಸಿಡೆನ್ಸಿಯ ನೆಲ ಮಹಡಿಯಲ್ಲಿ ಉದ್ಘಾಟಿಸಲಾಯಿತು.

ಮಾಜಿ ಸಚಿವ ಹಾಗೂ ಶಾಸಕ ಪ್ರಮೋದ್ ಮಧ್ವರಾಜ್ ಅವರು ದೀಪ ಬೆಳಗಿಸುವುದರ ಮೂಲಕ ನೂತನ ಕಚೇರಿಯ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು.

30ನೇ ಒಳಕಾಡು ವಾರ್ಡಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಜ್ಯೋತಿ ಹೆಬ್ಬಾರ್ ಅವರು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಇದರ ಉಪಾಧ್ಯಕ್ಷರಾಗಿ ಪಕ್ಷದಲ್ಲಿ ಸಕ್ರೀಯರಾಗಿದ್ದು, ಉತ್ತಮ ಮಾತುಗಾರರು ಕೂಡ ಹೌದು. ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ತನ್ನ ನೇರ ಮಾತುಗಳಿಂದ ಟೀಕಿಸುವ ಇವರ ನಾಯಕತ್ವವನ್ನು ಗಮನಿಸಿ ಪಕ್ಷ ಈ ಬಾರಿಯ ನಗರಸಭಾ ಚುನಾವಣೆಗೆ 30ನೇ ಒಳಕಾಡು ವಾರ್ಡಿನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

ಕಚೇರಿ ಉದ್ಘಾಟನೆ ವೇಳೆ ಎಐಸಿಸಿ ಸದಸ್ಯ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಗೀತಾ ವಾಗ್ಳೆ, ಕಾಂಗ್ರೆಸ್ ನಾಯಕರಾದ ಲಕ್ಷ್ಮಣ್ ಶೆಣೈ, ದಿನೇಶ್ ಪುತ್ರನ್, ಸರಸು ಬಂಗೇರ, ಜಯಶ್ರೀ ಕೃಷ್ಣರಾಜ್, ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಯುವ ಕಾಂಗ್ರೆಸ್ ನಾಯಕರಾದ ನೀರಜ್ ಪಾಟೀಲ್, ಸಂಜಯ್ ಆಚಾರ್ಯ, ನಬೀಲ್ ಉದ್ಯಾವರ ಹಾಗೂ ಇತರರು ಉಪಸ್ಥಿತರಿದ್ದರು.

ಜೊಯೆಲ್ ಸೋನ್ಸ್ ಸ್ವಾಗತಿಸಿ, ಧನ್ಯವಾದ ನೀಡಿದರು


Spread the love