ಕಾಪು ಯುವ ಮೋರ್ಚಾದ ವತಿಯಿಂದ ‘ಗೋವಿಗಾಗಿ ಮೇವು’ ಶ್ರಮದಾನ

Spread the love

ಕಾಪು ಯುವ ಮೋರ್ಚಾದ ವತಿಯಿಂದ ಗೋವಿಗಾಗಿ ಮೇವು ಶ್ರಮದಾನ

ಕಾಪು: ಭಾರತೀಯ ಜನತಾ ಪಾರ್ಟಿ ಕಾಪು ಮಂಡಲ ಯುವ ಮೋರ್ಚಾವತಿಯಿಂದ ಗೋವಿಗಾಗಿ ಮೇವು ಕಾರ್ಯಕ್ರಮಡಿ ನೀಲಾವರ ಗೋಶಾಲೆಗೆ ಗೋಗ್ರಾಸ ನೀಡುವ ಶ್ರಮದಾನ ಕಾರ್ಯಕ್ರಮ ಭಾನುವಾರ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪಿಗೆನಗರ ದಲ್ಲಿ ನಡೆಯಿತು.

ನೀಲಾವರದ ಗೋಶಾಲೆಯಲ್ಲಿ ಮೇವಿನ ಅಭಾವ ಉಂಟಾದ ಹಿನ್ನೆಲೆಯಲ್ಲಿ ಪೂಜ್ಯ ಪೇಜಾವರ ಶ್ರೀಗಳ ಮನವಿಯಂತೆ ಸಂಪಿಗೆನಗರದ ರಸ್ತೆ ಬದಿಯ ಹುಲ್ಲನ್ನು ಕಡಿದು ಗೋಶಾಲೆಗೆ ಕಾಪು ಯುವ ಮೋರ್ಚಾದ ವತಿಯಿಂದ ನೀಡಲಾಯಿತು.

ಈ ಸಂದರ್ಭದಲ್ಲಿ ರಾಜೇಶ್ ಕುಂದರ್ ಕಾರ್ಯದರ್ಶಿ ಕಾಪು ಮಂಡಲ,ರವಿ ಸಾಲ್ಯಾನ್ ಅಧ್ಯಕ್ಷರು ಉದ್ಯಾವರ ಮಹಾಶಕ್ತಿ ಕೇಂದ್ರ,ಕಾಪು ಮಂಡಲ ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಸುವರ್ಣ ಪಿತ್ರೋಡಿ, ಜಿಲ್ಲಾ ಯುವ ಮೋರ್ಚಾದ ಉಪಾಧ್ಯಕ್ಷರಾದ ಸಚಿನ್ ಬೊಳ್ಜೆ,ಕಾಪು ಯುವ ಮೋರ್ಚಾ ಕಾರ್ಯ ದರ್ಶಿ ಸೋನು ಪಾಂಗಾಳ, ಗಣೇಶ್ ಕುಮಾರ್ ಹಿಂದುಳಿದ ಮೋರ್ಚಾದ ಕೋಶಾಧಿಕಾರಿ ಯತೀಶ್ ಮಟ್ಟು ಜಿಲ್ಲಾ ಯುವ ಮೋರ್ಚಾದ ಕೋಶಾಧಿಕಾರಿ ಹಾಗೂ ಉದ್ಯಾವರ ಗ್ರಾಮದ ಬಿ.ಜೆ.ಪಿ ಕಾರ್ಯ ಕರ್ತರು ಉಪಸ್ಥಿತರಿದ್ದರು.


Spread the love