ಕೊರೋನ ದಿಂದ  ಮೃತರಾಗಿ ಅಂತ್ಯಕ್ರಿಯೆ ನಡೆದ ಬೋಳೂರು ಸ್ಮಶಾನ ಸ್ಥಳಕ್ಕೆ ಐವನ್ ಭೇಟಿ

Spread the love

ಕೊರೋನ ದಿಂದ  ಮೃತರಾಗಿ ಅಂತ್ಯಕ್ರಿಯೆ ನಡೆದ ಬೋಳೂರು ಸ್ಮಶಾನ ಸ್ಥಳಕ್ಕೆ ಐವನ್ ಭೇಟಿ

ಮಂಗಳೂರು: ಕೋರೋನದಿಂದ ಮೃತಪಟ್ಟ ಬಂಟ್ವಾಳದ ಮಹಿಳೆ ಅಂತ್ಯಕ್ರಿಯೆ ನಡೆದ ಬೋಳೂರಿನ ಚಿತಾಗಾರದಲ್ಲಿ ಮತ್ತೆ ಮೃತದೇಹವನ್ನು ತರಬಾರದು ಮತ್ತು ಸ್ಥಳದ ಕ್ರಿಮಿನಾಶ ಮಾಡುವ ಮದ್ದು ಸಿಂಪಡಿಸಿ ಇಲ್ಲ ಎಂಬ ದೂರಿನ ನೊಂದಿಗೆ ಈ ಭಾಗದ ಜನರು ಆಕ್ರೋಶಿತರಾಗಿ ದ್ದರು, ಹಾಗೂ ಮತ್ತೆ ಕೊರೋನ ಮೃತ ದೇಹವನ್ನು ತರಬಾರದು ಎಂಬ ಬೇಡಿಕೆ ಬಗ್ಗೆ ಸಾರ್ವಜನಿಕರು ವ್ಯಕ್ತಪಡಿಸಿದರು.

ಈ ಕುರಿತು ಮಾಹಿತ ಪಡೆದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಬೇಡಿಕೆಗಳನ್ನು ಆಲಿಸಿದರಲ್ಲದೆ ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ಶಾಸಕ   ಐವನ್ ಡಿಸೋಜಾ ಸಾರ್ವಜನಿಕರನ್ನು ಸಮಾಧಾನಿಸಿದರು.


Spread the love