ಗೃಹರಕ್ಷಕ ಸಿಬ್ಬಂದಿಯ ಕಣ್ಣೀರು ಒರೆಸಿದ ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ

Spread the love

ಗೃಹರಕ್ಷಕ ಸಿಬ್ಬಂದಿಯ ಕಣ್ಣೀರು ಒರೆಸಿದ ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ

ಮಂಗಳೂರು: ಸೊಂಟದ ಬಲವನ್ನು ಕಳೆದುಕೊಂಡ ಗೃಹರಕ್ಷಕ ಸಿಬಂದಿ ಚಂಪಾ ಚಮ್ಮಗಾರ್ತಿಯವರ ನೋವಿಗೆ ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.

ಜನಸಾಮಾನ್ಯರ ಸುಗಮ ಸಂಚಾರಕ್ಕೆ ಹಗಲು- ರಾತ್ರಿ , ಬಿಸಿಲು- ಮಳೆಯಲ್ಲು ದುಡಿದ ಗೃಹರಕ್ಷಕ ಸಿಬ್ಬಂದಿ ಮಂಗಳೂರಿನ ಶಕ್ತಿನಗರ ನಿವಾಸಿ ಚಂಪಾ ಚಮ್ಮಗಾರ್ತಿ ಬರೊಬ್ಬರಿ 26 ವರ್ಷಗಳಿಂದ ಗೃಹರಕ್ಷಕ ದಳದಲ್ಲಿ ದುಡಿದಿದ್ದಾರೆ ಆದರೆ ಅವರ ಈಗಿನ ಪರಿಸ್ಥಿತಿ ಮಾತ್ರ ಕೆಳುವವರಿಲ್ಲದಾಗಿದೆ ಒಂದು ಕಡೆ ತನ್ನ ದುಡಿಮೆ ಇಲ್ಲದಿದ್ದರೆ ಹೊಟ್ಟೆಗೆ ಹಿಟ್ಟಿಲ್ಲ ಎನ್ನುವಂತದ್ದು ಕಳೆದ ಎರಡು ತಿಂಗಳಿನಿಂದ ತಮ್ಮ ಸೊಂಟದ ಬಲವನ್ನು ಕಳೆದುಕೊಂಡ ಇವರ ದುಡಿಮೆ ಕನಸಿನ ಮಾತಾಗಿತ್ತು.ಈಗ ಮಲಗಿದಲ್ಲೆ ಇರುವ ಇವರು ಒಂದು ಕಡೆ ದುಡಿಮೆ ಇಲ್ಲ ಮತ್ತೊಂದು ಕಡೆ ಎದ್ದು ನಡೆಯಲಾಗದ ಸ್ಥಿತಿಯಲ್ಲಿದ್ದಾರೆ.

ಇವರ ಶೋಚನೀಯ ಸ್ಥಿತಿಯನ್ನು ಸ್ಥಿತಿಯನ್ನು ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಗಮನಕ್ಕೆ ತರುತ್ತಾರೆ ಇದನ್ನು ಮನಗಂಡ ಮಿಥುನ್ ರೈ ತಕ್ಷಣ ಕಾರ್ಯಪ್ರವೃತ್ತರಾಗಿ ಇಂದು ಚಂಪಾ ಅವರ ಮನೆಗೆ ಭೇಟಿ ನೀಡಿ ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿ ಜೊತೆಗೆ ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಚಂಪಾ ಅವರ ಚಿಕಿತ್ಸೆಗಾಗಿ ಎಲ್ಲಾ ವ್ಯವಸ್ಥೆಯನ್ನು ಉಚಿತವಾಗಿ ತಮ್ಮ ಕೈಯಿಂದಲೆ ಭರಿಸಲು ಮುಂದಾಗಿದ್ದಾರೆ.

ತನ್ನ ಜೀವನದಲ್ಲಿ ಭರವಸೆಯನ್ನೆ ಕಳೆದುಕೊಂಡಿದ್ದ ಚಂಪಾ ಅವರಿಗೆ ಮಿಥುನ್ ರೈ ಅವರ ಸಹಾಯ ಹಸ್ತದಿಂದ ಮತ್ತೆ ಮರುಜನ್ಮ ದೊರಕಿದಂತಾಗಿದೆ.


Spread the love