ಜಗದೀಶ್ ಸುವರ್ಣ ಅಸಹಜ ಸಾವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ; ಕೇಸು ದಾಖಲು

Spread the love

ಜಗದೀಶ್ ಸುವರ್ಣ ಅಸಹಜ ಸಾವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ; ಕೇಸು ದಾಖಲು

ಮಂಗಳೂರು: ಬಜರಂಗದಳ ಸಂಚಾಲಕ ಜಗದೀಶ್ ಸುವರ್ಣ ಅವರ ಸಂಶಯಾಸ್ಪದ ಸಾವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟಿಂಗ್ ಹಾಕಿದ ಕಾರಣಕ್ಕಾಗಿ ವೀರಕೇಸರಿ ಎಂಬ ಫೇಸ್ ಬುಕ್ ಪೇಜಿನ ಮೇಲೆ ಪಣಂಬೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

ಎಪ್ರಿಲ್ 20 ರಂದು ಜಗಧೀಶ್ ಅವರು ರಾತ್ರಿ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗ್ರೆಗೆ ತೆರಳಿದ್ದು, ಮನೆಗೆ ವಾಪಾಸಾಗಿರಲಿಲ್ಲ. ಮಾರನೇ ದಿನ ಅವರ ಮೃತದೇಹ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿತ್ತು.
ಅವರ ಸಹೋದರ ಶಿವಾನಂದ ಪಣಂಬೂರು ಪೋಲಿಸ್ ಠಾಣೆಯಲ್ಲಿ ಜಗದೀಶ್ ಅವರ ಸಂಶಯಾಸ್ಪದ ಸಾವಿನ ಕುರಿತು ಪ್ರಕರಣ ದಾಖಲಿಸಿದ್ದರು.

ಈ ನಡುವೆ ಜಗದೀಶ್ ಅವರ ಸಾವಿನ ಕುರಿತು ಅವಹೇಳನಕಾರಿಯಾದ ಪೋಸ್ಟಿಂಗ್ ವೀರಕೇಸರಿ ಫೇಸ್ ಬುಕ್ ಪೇಜಿನಲ್ಲಿ ಹಾಕಲಾಗಿದ್ದು, ಇಂತಹ ಪೋಸ್ಟಿಂಗ್ ಹಾಗೂ ಕಮೆಂಟ್ ಸಾರ್ವಜನಿಕ ಶಾಂತಿ ಭಂಗಕ್ಕೆ ಕಾರಣವಾಗಬಹುದು ಮತ್ತು ಯಾವುದೇ ಘಟನೆಗಳು ಜರುಗದಂತೆ ಮುಂಜಾಗ್ರತೆ ವಹಿಸಿ ಪೋಲಿಸರು ವೀರಕೇಸರಿ ಪೇಜಿನ ಮೇಳೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love