ಜನವರಿ 28 ರಂದು‘ಭಕ್ತಿರಥ’ ಸಂಗೀತ ಕಾರ್ಯಕ್ರಮ

Spread the love

ಜನವರಿ 28 ರಂದು‘ಭಕ್ತಿರಥ’ ಸಂಗೀತ ಕಾರ್ಯಕ್ರಮ

ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನ (ರಿ), ಮಂಗಳೂರು ಇದರ ವತಿಯಿಂದ ಇದೇ ಬರುವ ಆದಿತ್ಯವಾರ ತಾ28.01.2018 ರಂದು ನಗರದ ಶ್ರೀ ವೆಂಕಟರಮಣ ದೇವಸ್ಥಾನ ಕಾರ್‍ಸ್ಟ್ರೀಟ್ ಮಂಗಳೂರು ಇದರ ಆಶ್ರಯದಲ್ಲಿ ದೇವಸ್ಥಾನದ ರಥೋತ್ಸವ ಪ್ರಯುಕ್ತ ದೇವಸ್ಥಾನದ ರಾಜಾಂಗಣದಲ್ಲಿ ಸಂಜೆ 5.30 ಘಂಟೆಯಿಂದ ‘ಭಕ್ತಿರಥ’ ಎಂಬ ಸಂತವಾಣಿ ಭಕ್ತಿಗೀತೆಗಳ ರಸದೌತಣ ಕಾರ್ಯಕ್ರಮ ನಡೆಯಲಿದೆ.

ನಮ್ಮ ದೇಶದ ಉತ್ಕೃಷ್ಟ ಮಟ್ಟದ ಹಿಂದೂಸ್ತಾನೀ ಸಂಗೀತ ಗಾಯಕರಾದ ಪದ್ಮಶ್ರೀ ಪುರಸ್ಕೃತ ಪಂ ವೆಂಕಟೇಶ್ ಕುಮಾರ್ ಈ ದಾಸವಾಣಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
‘ಐಡಿಯಲ್ ಐಸ್‍ಕ್ರೀಮ್’ ಮುಖ್ಯ ಪ್ರಾಯೋಜಕರಾಗಿರುವ ಈ ಕಾರ್ಯಕ್ರಮಕ್ಕೆ ಕರ್ಣಾಟಕ ಬ್ಯಾಂಕ್ (ರಿ), ಕಾಪೆರ್Çೀರೇಶನ್ ಬ್ಯಾಂಕ್, ಕೆನರಾ ಬ್ಯಾಂಕ್, ಎಕ್ಸ್‍ಪರ್ಟ್ ಸಮೂಹ ಶಿಕ್ಷಣ ಸಂಸ್ಥೆ, ಭಾರತೀಯ ಜೀವವಿಮಾ ನಿಗಮ, ಸಾಗರ್ ರಿಯಾಲಿಟಿ ಪ್ರಮೋಶನ್ಸ್, ಎಕ್ಸಿಸ್ ಬ್ಯಾಂಕ್, ಸ್ಕೂಲ್ ಬುಕ್ ಕಂಪನಿ, ಹಾಗೂ ಡೆನ್‍ಶ್ಯೂರ್ ಕ್ಲಿನಿಕ್ ಸಹ ಪ್ರಾಯೋಜಕರಾಗಿ ಸಹಕರಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಹಾರ್ಮೋನಿಯಂ ಸಾಥೀದಾರರಾಗಿ ಮಂಗಳೂರಿನ ಶ್ರೀ ನರೇಂದ್ರ ಎಲ್. ನಾಯಕ್, ತಬ್ಲಾದಲ್ಲಿ ಬೆಂಗಳೂರಿನ ಶ್ರೀಕೇಶವ್ ಜೋಶಿ ಹಾಗೂ ಶ್ರೀ ದತ್ತಾತ್ರೇಯ ಜೋಶಿ ಮತ್ತು ತಾಳದಲ್ಲಿ ಮಾ.ರಾಮ್‍ನಾಥ್ ಕಿಣಿ ಸಹಕರಿಸಲಿದ್ದಾರೆ. ಕಾರ್ಯಕ್ರಮದ ಸಮನ್ವಯಕಾರರಾಗಿ ಶ್ರೀಮತಿ ಉಷಾಪ್ರಭಾ ಎನ್. ನಾಯಕ್‍ರವರು ಭಾಗವಹಿಸಲಿದ್ದಾರೆ.


Spread the love