ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸಿಹಿ ತಿಂಡಿ ವಿತರಿಸಿ ಸಂಭ್ರಮ ಆಚರಣೆ

Spread the love

ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸಿಹಿ ತಿಂಡಿ ವಿತರಿಸಿ ಸಂಭ್ರಮ ಆಚರಣೆ

ಕುಮಾರಸ್ವಾಮಿಯವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸಿಹಿ ತಿಂಡಿ ವಿತರಿಸಿ ಸಂಭ್ರಮ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಸುಶೀಲ್ ನೊರೊನ್ಹ ಮಾತನಾಡಿ  ಕಳೆದ 2೦ ವರ್ಷಗಳ ಹಿಂದೆ ಪರಿಪೂರ್ಣ ಆಡಳಿತ ನಡೆಸಿದ ಜನತಾದಳ ಸರಕಾರದ ಅವಧಿಯಲ್ಲಿ ನಮ್ಮ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಅಧಿಕಾರ ಅನುಭವಿಸಿದ ಪಕ್ಷದ ನಾಯಕರು ಮಾಜಿ ಸಚಿವ ಅಮರನಾಥ್ ಶೆಟ್ಟಿರವರನ್ನು ಒಬ್ಬರನ್ನು ಬಿಟ್ಟು ಬೇರೆ ಎಲ್ಲಾ ನಾಯಕರು ಬೇರೆ ಬೇರೆ ಪಕ್ಶಗಳಿಗೆ ವಲಸೆ ಹೋದರು. ಇನ್ನೊಂದೆಡೆ 2006-7 ಅವಧಿಯಲ್ಲಿ ಸಮಿಶ್ರ ಸರಕಾರ ಆಡಳಿತದಲ್ಲಿ ಕಾರ್ಯಕರ್ತರಿಗೆ ಯಾವುದೇ ಅಧಿಕಾರ ದೊರೆಯಲಿಲ್ಲ.

ಹೀಗೆ ಕಳೆದ 20 ವರ್ಷಗಳಲ್ಲಿ ಯಾವುದೇ ಆಸೆ ಆಕಾಂಕ್ಷೆ ವಿಲ್ಲದೇ ನಿಷ್ಟಾವಂತ ಪ್ರಮಾಣಿಕ ಕಾರ್ಯಕರ್ತರು ಜಿಲ್ಲೆಯಲ್ಲಿ ಎರಡು ಪ್ರಬಲ ಪಕ್ಷಗಳ ನಡುವೆ ಬಲಹೀನರಾದರೂ ಪಕ್ಷ ಬೆಳೆಸಲು ಪ್ರಾಮಾಣಿಕವಾಗಿ ದುಡಿದಿದ್ದಾರೆ. ಇಂದು 11 ವರ್ಷಗಳ ನಂತರ ನಮ್ಮ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದು ಜಿಲ್ಲೆಯ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಮೂಡಿ ಬಂದಿದೆ ಹಾಗೂ ಪಕ್ಷ ಸಂಘಟನೆಗೆ ಬಲ ಬಂದಿದೆ.

ಮುಂದಿನ ದಿನಗಳಲ್ಲಿ ಸದನದಲ್ಲಿ ಬಹುಮತ ಸಾಬಿತು ಪಡಿಸಿ ಹೊಸ ಮಂತ್ರಿ ಮಂಡಲದೊಂದಿಗೆ ಈ ರಾಜ್ಯದಲ್ಲಿ ಧಾರ್ಮಿಕ ಸೌಹಾರ್ದತೆ,ಆಡಳಿತ ಯಂತ್ರಕ್ಕೆ ಚುರುಕು ಹಾಗೂ ಆಡಳಿತ ಪಾರದರ್ಷಕತೆ,ಕಟ್ಟುನಿಟ್ಟಿನ ಕಾನೂನು,ಯುವ ಜನಾಂಗಕ್ಕೆ ಶಿಕ್ಷಣ ಉದ್ಯೋಗ,ರೈತರ ದೀನ ದಲಿತರ ಪರ ಸರಕಾರವಾಗಲಿ ಎಂದು ಹಾರೈಸಿದರು

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯ ಅಧ್ಯಕ್ಷರಾದ ರಾಮ್ ಗಣೇಶ್,ರಾಮಕ್ರಷ್ಣ ಶೆಟ್ಟಿ,ಗೋಪಾಲ್ ಕ್ರಷ್ಣ ಅತ್ತಾವರ,ಲತೀಫ್ ಒಳಚಿಲ್, ಕೋರ್ಪರೇಟರ್ ಅಜೀಜ್ ಕುದ್ರೋಳಿ,ಪ್ರಕಾಶ್ ಗೋಮ್ಸ್,ಶ್ರೀ ಯಿಯಾಜ್,ಶ್ರೀ ಹಮೀದ್ ಬೇಂಗ್ರೆ, ಶ್ರೀ ವಿನ್ಸೆಂಟ್ ಡಿಸೋಜ,ಆರೀಫ್, ಪುಶ್ಪರಾಜ್ ಶೆಟ್ಟಿ, ಗಂಗಾದರ್ ಉಲ್ಲಾಲ್,ಕನಕದಾಸ್, ರಘು, ಕುಲದೀಪ್, ಶ್ರೀಮತಿ ಚುಡಾಮಣಿ,ಶ್ರೀಮತಿ ಕವಿತಾ, ಶ್ರೀಮತಿ ಲೀಲವತಿ,ಶ್ರೀಮತಿ ಭಾರತಿ ಮುಂತಾದರು ಉಪಸ್ಥಿತರಿದ್ದರು.


Spread the love