ಜ19 : ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾರಿಂದ ಐ.ಸಿ.ವೈ.ಎಮ್ ಉದ್ಯಾವರ ಸುವರ್ಣ ಮಹೋತ್ಸವ ಉದ್ಘಾಟನೆ

Spread the love

ಜ19 : ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾರಿಂದ ಐ.ಸಿ.ವೈ.ಎಮ್ ಉದ್ಯಾವರ ಸುವರ್ಣ ಮಹೋತ್ಸವ ಉದ್ಘಾಟನೆ

ಉಡುಪಿ: ಸಂತ ಪ್ರಾನಿಸ್ಸ್ ಕ್ಸೇವಿಯರ್ ದೇವಾಲಯದ ಯುವ ಸಂಘಟನೆ, ಭಾರತೀಯ ಕಥೋಲಿಕ್ ಯುವ ಸಂಚಾಲನ ಉದ್ಯಾವರ ಇದರ ಸುವರ್ಣ ಮಹೋತ್ಸವದ ಉದ್ಘಾಟನೆಯು ಜನವರಿ 19 ರಂದು ಆದಿತ್ಯವಾರ ಸಂಜೆ 5.15ಕ್ಕೆ ಉದ್ಯಾವರ ಸಂತ ಫ್ರಾನಿಸ್ಸ್ ಕ್ಸೇವಿಯರ್ ದೇವಾಲಯದ ವಠಾರದಲ್ಲಿ ಜರುಗಲಿದೆ ಎಂದು ಕಾರ್ಯಕ್ರಮಗಳ ಸಂಚಾಲಕ ಸ್ಟೀವನ್ ಕುಲಾಸೊ ಹೇಳಿದರು.

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 1971ರಲ್ಲಿ ದೇವಾಲಯದ ಸಹಾಯಕ ಧರ್ಮಗಳುಗಳಾಗಿ ಸೇವೆ ಸಲ್ಲಿಸುತ್ತಿದ್ದ ವಂ ಹೆನ್ರಿ ಫೆರ್ನಾಂಡಿಸ್ ರವರು ಅಂದಿನ ಯುವಕ ಯುವತಿಯರನ್ನು ಒಗ್ಗೂಡಿಸಿ ಸಿವೈಎ ಎಂಬ ಹೆಸರಿನೊಂದಿಗೆ ಈ ಸಂಸ್ಥೆಯನ್ನು ಆರಂಭಿಸಿದ್ದರು. ಕಾಲಕ್ರಮೇಣ ಸಿವೈಎ ಹೆಸರು ಬದಲಾಗಿ ಐಸಿವೈಎಂ ಆಗಿ ಈ ಸಂಸ್ಥೆ ಮರು ನಾಮಕರಣವಾಗಿತ್ತು.

“ಸೇವೆಯೊಂದಿಗೆ ನಾಯಕತ್ವ” ಎಂಬ ಧ್ಯೇಯದೊಂದಿಗೆ ಈ ಸಂಸ್ಥೆ ಬೆಳೆದಿದ್ದು, ಸ್ಥಾಪಕ ಅಧ್ಯಕ್ಷರಾಗಿ ದಿ.ಜೊಯ್ಪಿರೇರಾ ಸೇವೆ ಸಲ್ಲಿಸಿದ್ದಾರೆ. ಕಳೆದ49 ವರ್ಷಗಳಲ್ಲಿ ವರ್ಷಂಪ್ರತಿ ಹೊಸ ಅಧ್ಯಕ್ಷರ ನೇತೃತ್ವದಲ್ಲಿ ಹೊಸ ಕಾರ್ಯಕಾರಿ ಸಮಿತಿಗಳು ಆಸ್ತಿತ್ವಕ್ಕೆ ಬಂದಿದ್ದು, ಹಲವಾರು ಯುವಕ ಯುವತಿಯರು ಸಂಚಲನದ ನೇತೃತ್ವವನ್ನು ವಹಿಸಿ, ತಮ್ಮ ನಾಯಕತ್ವವನ್ನು ಮತ್ತು ಪ್ರತಿಭೆಯನ್ನು ಸಮಾಜಕ್ಕೆ ತೋರ್ಪಡಿಸಿದ್ದಾರೆ. ಬಡವರಿಗೆ ವೈದ್ಯಕೀಯ ಮತ್ತು ವಿದ್ಯಾರ್ಥಿಗಳಿಗೆ ಸಾಲ್ಕರ್ಶಿಪ್, ವಿವಿಧ ಆರೋಗ್ಯ ತಪಾಸಣ ಶಿಬಿರಗಳು, ನಾಯಕತ್ವದ ಮಾಹಿತಿ, ಯುವ ಸಮಾವೇಶ, ಶ್ರಮದಾನ, ಕ್ರೀಡಾಕೂಟ ಸಹಿತ ದೇವಾಲಯ ಮಾತ್ರವಲ್ಲದೇ, ಗ್ರಾಮದಲ್ಲಿಯೂ ತನ್ನ ಕೈಯಲ್ಲ್ಲಾದಷ್ಟೂ ಸಹಾಯ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸರ್ವರಿಗೂ ಸಹಕಾರಿಯಾಗಿದೆ.

ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಹಲವಾರು ಯುವಕರು ಧರ್ಮಗುರುಗಳಾಗಿದ್ದು, ದೇವಾಲಯದ ಮತ್ತು ಧರ್ಮ ಪ್ರಾಂತ್ಯಕ್ಕೆ ಸಂತಸದ ವಿಷಯ. ಶ್ರೀಮಂತ ಬಡವ ಎಂಬ ಬೇದವಿಲ್ಲದೆ ಎಲ್ಲಾ ಯುವಕರು ಸಹೋದರ – ಸಹೋದರಿಯಂತೆ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ತಿಂಗಳಿಗೆ ಒಂದು ಕಾರ್ಯಕ್ರಮದಂತೆ ವರ್ಷಕ್ಕೆ ಕನಿಷ್ಟ 12 ಕಾರ್ಯಕ್ರಮಗಳನ್ನು ಸಂಘಟಿಸಿ ಯುವಕರಿಗೆ ನಾಯಕತ್ವದ ದಾರಿಯನ್ನು ತೋರಿಸಿದೆ. ಈ ಸಂಚಲನದಲ್ಲಿ ಸೇವೆಯಲ್ಲಿಸಿದ ಯುವ ಜನರು ಕೇವಲ ಉದ್ಯಾವರಕ್ಕೆ ಸೀಮಿತವಾಗಿರದೆ ವಲಯ, ಧರ್ಮ ಪ್ರಾಂತ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ನಾಯಕತ್ವವನ್ನು ಪ್ರದರ್ಶಸಿದ್ದಾರೆ.

ಪ್ರಸ್ತುತ ವರ್ಷವು ಐಸಿವೈಎಂ ಉದ್ಯಾವರ ಘಟಕಕ್ಕೆ 50ನೇ ವರ್ಷ. ಸುವರ್ಣ ಮಹೋತ್ಸವ ಸಂಭ್ರಮವನ್ನು ಐತಿಹಾಸಿಕವಾಗಿ ನಡೆಸಲು ಈ ಸಂಘಟನೆಯು ನಿರ್ಧರಿಸಿದೆ. ಪ್ರಸ್ತುತ ದೇವಾಲಯದ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿರುವ, ಧರ್ಮ ಪ್ರಾಂತ್ಯದ ಕುಲಪತಿ ಅತಿ ವಂದನೀಯ ಸ್ಟಾನಿ.ಬಿಲೆÉೂೀಬೊರವರ ವಿಶೇಷ ಮುತುವರ್ಜಿಯಿಂದ ಸುವರ್ಣ ಮಹೋತ್ಸವದ ಕಾರ್ಯಕ್ರಮಗಳಿಗಾಗಿ, ಸುವರ್ಣ ಮಹೋತ್ಸವದ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ. ಈ ಸಮಿತಿಯಲ್ಲಿ ಅಂದಿನ ಸಿವೈಎದಿಂದ ಇಂದಿನ ಐಸಿವೈಎಂ ವರೆಗೆ ಸೇವೆ ಸಲ್ಲಿಸಿದ ಹಲವಾರು ಹಿರಿಯ ಕಿರಿಯ ಸದಸ್ಯರಿಗೆ ಪ್ರಧಾನ ಸಮಿತಿ ಮತ್ತು ಸಹ ಸಮಿತಿಗಳಿಗೆ ಆಯ್ಕೆ ಮಾಡಲಾಗಿದೆ. ಐಸಿವೈಎಂ ಸಂಘÀಟನೆಯ ಮಾಜಿ ಅಧ್ಯಕ್ಷ ಪ್ರಸ್ತುತ ದೇವಾಲಯದ ಕಾರ್ಯದರ್ಶಿ ಮೈಕಲ್ ಡಿಸೋಜಾರವರನ್ನು ಅಧ್ಯಕ್ಷರನ್ನಾಗಿ, ಡೋರಾ ಅರೋಜಾರವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕಮಾಡಿಲಾಗಿದೆ. ಈ ಸಂಘಟನೆಯ ದಶಮಾನೋತ್ಸವದ ಅಧ್ಯಕ್ಷರಾಗಿ ಯಶಸ್ವಿ ಕಾರ್ಯಕ್ರಮಗಳನ್ನು ಅಯೋಜಿಸಿದ್ದ, ಪ್ರಸ್ತುತ ಯಶಸ್ವಿ ಉದ್ಯಮಿ ನೋರ್ಬರ್ಟ್ ಕ್ರಾಸ್ಟೊರವರನ್ನು ಸುವರ್ಣ ಮಹೋತ್ಸವ ಸಮಿತಿಯ ಗೌರವದ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಈ ಸಂಘಟನೆಯ ಅದ್ಯಾತ್ಮಿಕ ನಿರ್ದೇಶಕರಾಗಿ ಅತಿ ವಂದನೀಯ ಸ್ಟಾನಿ ಬಿ ಲೋಬೊರವನ್ನು ಆಯ್ಕೆ ಮಾಡಲಾಗಿದೆ. ಸುವರ್ಣ ಮಹೋತ್ಸವದ ವರ್ಷದಲ್ಲಿ 50 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಸಂಚಾಲಕರರಾಗಿ ಸ್ಟೀವನ್ ಕುಲಾಸೊರವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನ ಸಮಿತಿ ಸಹಿತ ಸಹ ಸಮಿತಿಗಳನ್ನು ರಚಿಸಲಾಗಿದ್ದು. ಹಲವಾರು ಮಂದಿಗೆ ತಮ್ಮ ನಾಯಕತ್ವ ಮತ್ತು ಪ್ರತಿಭೆÉಯನ್ನು ತೋರ್ಪಡಿಸಲು ಅವಕಾಶ ದೊರಕಿದೆ.

ಸುವರ್ಣ ಮಹೋತ್ಸವದ ಉದ್ಘಾಟನೆಯು ಇದೇ ತಿಂಗಳ 19 ರಿಂದ ಆದಿತ್ಯವಾರ ಸಂಜೆ 5.15ಕ್ಕೆ ಉದ್ಯಾವರ ಸಂತ ಫ್ರಾನಿಸ್ಸ್ ಕ್ಸೇವಿಯರ್ ದೇವಾಲಯದ ವಠಾರದಲ್ಲಿ ಜರುಗಲಿದೆ. ಮಾಜಿ ಕೇಂದ್ರ ಸಚಿವೆ ,ಮಾಜಿ ರಾಜ್ಯ ಪಾಲರಾಗಿ ಸೇವೆ ಸಲ್ಲಿಸಿದ ಗೌರವಾನ್ವಿತ ಮಾರ್ಗರೇಟ್ ಅಳ್ವಾ ಸುವರ್ಣ ಮಹೋತ್ಸವದ ಮತ್ತು 50 ಕಾರ್ಯಕ್ರಮಗಳ ಉದ್ಘಾಟನೆಯನ್ನು ಮಾಡಲಿದ್ದಾರೆ. ಉಡುಪಿ ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾಗಿರುವ ಪರಮ ಪೂಜ್ಯ ಡಾ| ಜೆರಾಲ್ಡ್ ಐಸಾಕ್ ಲೋಬೋ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾಗಿರುವ ಲಾಲಾಜಿ ಆರ್ ಮೆಂಡನ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ , ಧರ್ಮ ಪ್ರಾಂತ್ಯದ ಕುಲಪತಿ ಅತಿ ವಂದನೀಯ ಸ್ಟಾನಿ ಬಿ ಲೋಬೋ, ಉಡುಪಿ ವಲಯದ ಪ್ರಧಾನ ಧರ್ಮಗುರು ವಂದನೀಯ- ವಲೇರಿಯನ್ ಮೆಂಡೊನ್ಸಾ, ಸ್ಥಾಪಕ ಧರ್ಮಗುರು ವಂ ಹೆನ್ರಿ ಫೆರ್ನಾಂಡಿಸ್, ಐಸಿವೈ ಎಂ ಕರ್ನಾಟಕ ಪ್ರಾಂತೀಯ ಅಧ್ಯಕ್ಷ ಜೈಸನ್ ಪಿರೇರಾ , ಸಂಸ್ಥೆಯ ಗೌರವದ್ಯಕ್ಷ ನೋಬರ್ಟ್ ಕ್ರಾಸ್ಟೋ, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ್ ಆಳ್ವಾ, ಸಹಾಯಕ ಧರ್ಮಗುರು ವಂದನೀಯ ರೊಲ್ವಿನ್ ಅರಾನ್ನ ಮುಖ್ಯ ಅತಿಥಿಗಳಾಗಿ ಭಾಗವಹಿಸಿಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದವವರನ್ನು ಮತ್ತು ನಿರ್ಧೇಶಕರಾಗಿ ಸೇವೆ ಸಲ್ಲಿಸಿದವರಿಗೆ ಗೌರವಿಸುವ ಕಾರ್ಯಕ್ರಮವಿದೆ. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕøತಿಕ ಕಾರ್ಯಕ್ರಮವಾಗಿ ಐಸಿವೈಎಂ ಸಂಘಟನೆಯ ಮಾಜಿ ಮತ್ತು ಹಾಲಿ ಸದಸ್ಯರಿಂದ ಕೊಂಕಣಿ ಹಾಸ್ಯಮಯ ನಾಟಕ “ಬೇವಾರಿಸ್” ಪ್ರದರ್ಶವಾಗಿಲಿದೆ. ನಾಟಕದ ರಚನೆಯನ್ನು ಜೋನಿ ಮರಿಯ ಭೂಮಿ, ಖ್ಯಾತ ನಿರ್ಧೇಶಕ ಗಣೇಶ್ ರಾವ್ ಎಲ್ಲೂರು ಈ ನಾಟಕದ ನಿರ್ದೇಶನ ಮಾಡುತ್ತಿದ್ದಾರೆ.

ಜನವರಿ 19 ರಂದು ಉದ್ಘಾಟನಾ ಸಮಾರಂಭಕ್ಕೆ ಪೂರ್ವಬಾವಿಯಾಗಿ ಸಂಜೆ 4 ಗಂಟೆಗೆ ಉಡುಪಿ ಧರ್ಮ ಪ್ರಾಂತ್ಯದ ಧರ್ಮಧ್ಯಕ್ಷರಾದ ಪರಮ ಪೂಜ್ಯ ಡಾ| ಜೆರಾಲ್ಡ್ ಐಸಾಕ್ ಲೋಬೋರವರ ನೇತೃತ್ವದಲ್ಲಿ ದಿವ್ಯ ಬಲಿ ಪೂಜೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ವಂ|ಸ್ಟ್ಯಾನಿ ಬಿ ಲೋಬೊ, ಪದಾಧಿಕಾರಿಗಳಾದ ರೊಯ್ ಸ್ಟನ್ ಲೂವಿಸ್, ಪ್ರವೀಣ್ ಪಿಂಟೊ, ರೊನಾಲ್ಡ್ ಡಿಸೋಜಾ, ವಿಲ್ಫ್ರೇಡ್ ಡಿಸೋಜಾ, ಜೆರಾಲ್ಡ್ ಪಿರೇರಾ ಇತರರು ಉಪಸ್ಥಿತರಿದ್ದರು.


Spread the love