ಝುಬೈರ್ ಕೊಲೆ ಪ್ರಕರಣ; ಐವರ ಬಂಧನ

Spread the love

ಝುಬೈರ್ ಕೊಲೆ ಪ್ರಕರಣ; ಐವರ ಬಂಧನ

ಮಂಗಳೂರು: ಉಳ್ಳಾಲದ ಮುಕ್ಕಚ್ಛೇರಿಯಲ್ಲಿ ನಡೆದ ಝುಬೈರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಪೋಲಿಸರು ಬುಧವಾರ ಬಂಧಿಸಿದ್ದಾರೆ.

ಬಂಧಿತರನ್ನು ಸುಹೈಲ್, ನಿಝಾಮುದ್ದೀನ್, ಮುಹಮ್ಮದ್ ಮುಸ್ತಾಫ, ತಾಜುದ್ದೀನ್, ಹಾಗೂ ಆಸೀಫ್ ಎಂದು ಗುರುತಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ನಗರ ಕಮೀಷನರ್ ಟಿ.ಆರ್.ಸುರೇಶ್ ಅವರು ಉಳ್ಳಾಲದ ಮುಕ್ಕಚ್ಚೇರಿ ಮಸೀದಿ ಮುಂಬಾಗದಲ್ಲಿ ತಲವಾರುಗಳಿಂದ ಧಾಳಿ ನಡೆಸಿ ಝುಬೈರ್ ಅವರನ್ನು ಹತ್ಯೆಗೈಯ್ಯಲಾಗಿತ್ತು. ಘಟನೆಯಲ್ಲಿ ಝುಬೈರ್ ಜೊತೆಗಿದ್ದ ಇಲಿಯಾಸ್ ಅವರಿಗೆ ಗಾಯಗಳಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಝುಬೈರ್ ಕುಟುಂಬಿಕರು ಉಳ್ಳಾಲ ಪೋಲಿಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಬಂಧಿತರಲ್ಲಿ ಐವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.


Spread the love