ಡಾ.ದೊಡ್ಡರಂಗೇ ಗೌಡ ಅವರಿಗೆ ದೆಹಲಿ ಕರ್ನಾಟಕ ಸಂಘದಿಂದ ಅಭಿನಂದನೆ

Spread the love

ಡಾ.ದೊಡ್ಡರಂಗೇ ಗೌಡ ಅವರಿಗೆ ದೆಹಲಿ ಕರ್ನಾಟಕ ಸಂಘದಿಂದ ಅಭಿನಂದನೆ

ದೆಹಲಿ : ಬದುಕು ಬಹಳ ದೊಡ್ಡದು. ಪ್ರಶಸ್ತಿಗಳಿಗಿಂತ ಬದುಕು ದೊಡ್ಡದು ಎಂದು ನಾನು ಭಾವಿಸಿದವನು. ಬದುಕಿನಲ್ಲಿ ನಾವು ಏನು ಸಾಧನೆ ಮಾಡಬೇಕಾದರೂ ಕೂಡಾ ನಮ್ಮ ಮಹತ್ವಾಕಾಂಕ್ಷೆಯನ್ನು ನಾವು ಮರೆಯಬಾರದು. ನಮ್ಮ ಪ್ರಾಮಾಣಿಕತೆಯನ್ನು ಬಿಡಬಾರದು. ಒಂದು ರೀತಿಯಲ್ಲಿ ಒಬ್ಬ ಬರಹಗಾರನಿಗೆ ಅತ್ಯುತ್ತಮ ಕೃತಿಗಳನ್ನು ಬರೆಯುವುದೇ ಅಥವಾ ತನ್ನ ಎಲ್ಲಾ ಅನುಭವಗಳನ್ನು ಕೂಡಾ ಅದನ್ನು ಅಭಿವ್ಯಕ್ತಿ ರೂಪಕೊಟ್ಟು ಅದನ್ನು ಸಾಹಿತ್ಯ ಕೃತಿಗಳನ್ನಾಗಿ ಮಾರ್ಪಡಿಸ ತಕ್ಕಂತದ್ದೇ ಅವನ ಮಹತ್ವಕಾಂಕ್ಷೆ. ಅದು ಅವನ ಕಾಯಕ. ನನಗೆ ಬರವಣಿಗೆ ಅನ್ನುವುದು ಒಂದು ತಪಸ್ಸು. 1960ನೇ ಇಸವಿಯಲ್ಲಿ ಬರೆಯಲು ಪ್ರಾರಂಭಿಸಿದೆ. 60ರ ಸುಮಾರಿಗೆ ನನ್ನ ಮೂರು ಕವಿತೆಗಳು ಆಕಾಶವಾಣಿಯಲ್ಲಿ ಪ್ರಸಾರವಾಯಿತು. ಆಗಿನ ಪತ್ರಿಕೆಗಳಲ್ಲಿ ನನ್ನ ಕವಿತೆಗಳು ಪ್ರಕಟಗೊಂಡವು. ಬರೆಯುತ್ತಾ ಹೋದೆ, ಬೆಳೆಯುತ್ತಾ ಹೋದೆ, ಕನ್ನಡವನ್ನೇ ನಿಚ್ಛಳವಾಗಿ ಬಳಸುತ್ತಾ ಹೋದೆ.ನನ್ನ ಬದುಕಿನ ಎಳೆಎಳೆಯು ಕೂಡಾ ನನ್ನ ಬರವಣಿಗೆಯಲ್ಲಿದೆ. ಲೇಖಕ ತನ್ನ ಬದುಕನ್ನಷ್ಟೇ ಅನಾವರಣ ಮಾಡಿದರೆ ಸಾಲದು, ಸುತ್ತಣ ಸಮಾಜವನ್ನು ಕೂಡಾ ಅವನು ಗಂಭೀರವಾಗಿ ಗಮನಿಸಬೇಕು. ಸಮಾಜದಲ್ಲಿರತಕ್ಕಂತಹ ಎಲ್ಲಾ ಓರೆಕೋರೆಗಳನ್ನು ಗಮನಿಸಬೇಕು. ಸಾಹಿತಿ ಸಮಾಜಮುಖಿಯಾಗಿರಬೇಕು ಎಂದು ಪದ್ಮಶ್ರೀ ಪುರಸ್ಕøತ ಡಾ.ದೊಡ್ಡರಂಗೇಗೌಡ ಅವರು ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.

ದೆಹಲಿ ಕರ್ನಾಟಕ ಸಂಘ ಏಪ್ರಿಲ್ 1ರಂದು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದ ಸಂದರ್ಭದಲ್ಲಿ ಡಾ. ದೊಡ್ಡರಂಗೇಗೌಡ ಅವರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿತ್ತು.

ಮುಂದುವರಿದು ಮಾತನಾಡುತ್ತ ಡಾ.ದೊಡ್ಡರಂಗೇಗೌಡ ಅವರು ‘ಇವತ್ತು ದೆಹಲಿ ಕರ್ನಾಟಕ ಸಂಘ ದೊಡ್ಡ ಶಕ್ತಿಯಾಗಿ ಬೆಳೆದಿದೆ’ ಇಲ್ಲಿಗೆ ಬರದೇ ಇರತಕ್ಕಂತಹ ಕನ್ನಡಿಗ ಇಲ್ಲವೇ ಇಲ್ಲ. ಕನ್ನಡಿಗ ಇಲ್ಲಿ ಬರಲಿಲ್ಲ ಅಂದರೆ ಅವನಿಗೆ ನಷ್ಟ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಂಗ ನಿರ್ದೇಶಕಶ್ರೀ ಎಂ.ಎಸ್. ಸತ್ಯುಅವರು ಮಾತನಾಡುತ್ತ ನನ್ನ ಮಾಧ್ಯಮ ನಾಟಕ ಮತ್ತು ಸಿನೇಮಾ.ಡಾ. ದೊಡ್ಡರಂಗೇಗೌಡರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಬಹಳ ಸಂತೋಷ ತಂದಿದೆ ಎಂದರು. ಇವರನ್ನು ಸಂಘದ ಪರವಾಗಿ ಅಭಿನಂದಿಸಲಾಯಿತು.

ವಸಂತ ಶೆಟ್ಟಿ ಬೆಳ್ಳಾರೆಯವರು ಮಾತನಾಡುತ್ತ ಅಬ್ಬಕ ಕುರಿತಾಗಿ ಹಿಂದಿಯಲ್ಲಿ ಮತ್ತಿತರ ಭಾಷೆಯಲ್ಲಿ ನಾಟಕಗಳು ಆಗಬೇಕು.

ಇದೇ ಸಂದರ್ಭದಲ್ಲಿ ಪ್ರಸ್ತುತಗೊಂಡ ಶ್ರೀ ಎಂ.ಎಸ್. ಸತ್ಯು ನಿರ್ದೇಶನ ದಗುಲ್ ಏ ಬಕಾವಲಿ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಎಂ.ನಾಗರಾಜ ಅವರು ನಿರೂಪಿಸಿದರು. ಡಾ. ಅಹಲ್ಯಾ ಚಿಂತಾಮಣಿ, ಹಿರಿಯ ಕಲಾವಿದ ಶ್ರೀ ಭೀಮರಾವ್ ಮುರಗೋಡ ಅವರು ಉಪಸ್ಥಿತರಿದ್ದರು.


Spread the love