ಡಿ.ಕೆ. ಶಿವಕುಮಾರ್ ಬಂಧನ ಯತ್ನ ಬಿ.ಜೆ.ಪಿ. ಪ್ರೇರಿತ – ದಿನೇಶ್ ಪುತ್ರನ್

Spread the love

ಡಿ.ಕೆ. ಶಿವಕುಮಾರ್ ಬಂಧನ ಯತ್ನ ಬಿ.ಜೆ.ಪಿ. ಪ್ರೇರಿತ – ದಿನೇಶ್ ಪುತ್ರನ್

ಉಡುಪಿ : ಸಚಿವರಾದ ಡಿ.ಕೆ. ಶಿವಕುಮಾರ್ರವರನ್ನು ತನಿಖೆ ನಡೆಸುವ ನೆಪದಲ್ಲಿ ಅವರ ಬಂಧನಕ್ಕೆ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದ್ದುಬಿಜೆಪಿಯ ರಾಜಕೀಯ ಪ್ರೇರಿತ ಕುತಂತ್ರ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ನ ಪ್ರಚಾರ ಸಮಿತಿಯ ಅಧ್ಯಕ್ಷರಾದ ದಿನೇಶ್ ಪುತ್ರನ್ ಆರೋಪಿಸಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳನ್ನು ಛೂ ಬಿಟ್ಟು ವಿರೋಧ ಪಕ್ಷಗಳ ನಾಯಕರನ್ನು ಮಟ್ಟ ಹಾಕುವ ಕೆಲಸಗಳು ಈ ದೇಶದಲ್ಲಿ ನಿರಂತರವಾಗಿ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಹಲವಾರು ನಾಯಕರನ್ನು ಈಗಾಗಲೇ ಆದಾಯ ತೆರಿಗೆ ಅಧಿಕಾರಿಗಳ ಮೂಲಕ ತನಿಖೆ ಹೆಸರಿನಲ್ಲಿ ಹದ್ದುಬಸ್ತಿನಲ್ಲಿ ಇಡುವ ಪ್ರಯತ್ನಗಳು ನಡೀತಾ ಇದೆ. ಇದೀಗ ಕರ್ನಾಟಕದ ಮಾಜಿ ಸಚಿವರಾದ ಡಿ.ಕೆ. ಶಿವಕುಮಾರ್ರವರನ್ನು ತನಿಖೆ ನಡೆಸುವ ನೆಪದಲ್ಲಿ ಅವರ ಬಂಧನಕ್ಕೆ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಅಕ್ರಮ ಹಣಗಳಿಕೆಯಲ್ಲಿ ಬಿ.ಜೆ.ಪಿ. ಅನೇಕ ನಾಯಕರ ಮೇಲೆ ಆಪಾದನೆಗಳಿದ್ದರೂ ಅವರ ವಿರುದ್ಧ ಯಾವುದೇ ತನಿಖೆಯನ್ನು ಕೈಗೊಳ್ಳದೇ ಕೇವಲ ವಿರೋಧ ಪಕ್ಷಗಳ ನಾಯಕರನ್ನೇ ಗುರಿಯಾಗಿ ನಡೆಸುವ ಆದಾಯ ಇಲಾಖೆಯ ಏಕಪಕ್ಷೀಯ ಕ್ರಮವನ್ನು ಈ ದೇಶದ ಜನತೆ ಗಮನಿಸುತ್ತಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಬಿ.ಜೆ.ಪಿ. ಇದಕ್ಕೆ ಭಾರಿ ತೆರಬೇಕಾಗುತ್ತದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ನ ಪ್ರಚಾರ ಸಮಿತಿಯ ಅಧ್ಯಕ್ಷರಾದ ದಿನೇಶ್ ಪುತ್ರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love