ಡೊಂಗರಕೇರಿ ವೆಂಕಟರಮಣ ದೇವಸ್ಥಾನಕ್ಕೆ ಕೇಂದ್ರ ಸಚಿವ ಶ್ರೀಪಾದ ಯಸ್ಸೊ ನಾಯ್ಕ   ಭೇಟಿ

Spread the love

ಡೊಂಗರಕೇರಿ ವೆಂಕಟರಮಣ ದೇವಸ್ಥಾನಕ್ಕೆ ಕೇಂದ್ರ ಸಚಿವ ಶ್ರೀಪಾದ ಯಸ್ಸೊ ನಾಯ್ಕ   ಭೇಟಿ

ಮಂಗಳೂರು:  ನಗರದ ಡೊಂಗರಕೇರಿ ವೆಂಕಟರಮಣ ದೇವಸ್ಥಾನಕ್ಕೆ ಕೇಂದ್ರ ಸಚಿವ ಶ್ರೀಪಾದ ಯಸ್ಸೊ ನಾಯ್ಕ ಗುರುವಾರ ರಾತ್ರಿ ಭೇಟಿ ನೀಡಿದರು.

ಈ ಸಂದರ್ಭ ದೇವಳದ ಟ್ರಸ್ಟಿ ವರದರಾಯ ನಾಗ್ವೇಕರ್ ಬರಮಾಡಿಕೊಂಡರು. ನಂತರ ಸಚಿವರು ದೇವರ ದರ್ಶನ ಮಾಡಿದರು.

ಈ ಸಂದರ್ಭ ವೈಶ್ಯ ಸಮಾಜದ ವತಿಯಿಂದ ಸಚಿವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ದೇವಳದ ವಾಸ್ತುಶಿಲ್ಪ ಸೌಂದರ್ಯವನ್ನು ವೀಕ್ಷಿಸಿದ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಮಂಗಳೂರು ಭೇಟಿಯ ಸಂದರ್ಭ ಇಲ್ಲಿದೆ ಭೇಟಿ ನೀಡುವುದಾಗಿ ತಿಳಿಸಿದರು. ದೇವಸ್ಥಾನದಲ್ಲಿ ನೆರೆದಿದ್ದ ಭಕ್ತರೊಂದಿಗೆ ಕುಳಿತುಕೊಂಡು ಸ್ವಲ್ಪ ಹೊತ್ತು ಸಮಾಲೋಚನೆ ನಡೆಸಿ ಅವರೊಂದಿಗೆ ಫೋಟೋ ತೆಗೆಸಿಕೊಂಡರು.

ಈ ಸಂದರ್ಭ ಶ್ರೀನಿವಾಸ್ ಪಿ. ಶೇಟ್ ಉಪಾಧ್ಯಕ್ಷರು ಬಿಜೆಪಿ ದಕ್ಷಿಣ, ವಿನಾಯಕ ಶೇಟ್ ಟ್ರಸ್ಟಿ, ಶಿವಾನಂದ ಶೇಟ್ ಶಾರದೋತ್ಸವ ಸಮಿತಿ, ಹರೇಂದ್ರನಾಥ್ ಶೇಟ್ ಮ್ಯಾನೇಜರ್, ಸಂಜಯ್ ಪ್ರಭು ಕೋಶಾಧಿಕಾರಿ ಬಿಜೆಪಿ, ರೂಪೇಶ್ ಶೇಟ್, ಸಂಜಯ ಸಾವಂತ್ ಗೋವಾ, ಹರವಿಂದ್‍ಪಾಲ್, ಶೈಲೇಶ್ ಶೇಟ್, ಗಣೇಶ್ ಉಮೇಶ್ ಶೇಟ್, ನಿತಿನ್ ಶೆಟ್ಟಿ, ಮೋಹಿತ್ ಸೂರ್ಯ ಶೇಟ್ ಉಪಸ್ಥಿತರಿದ್ದರು.


Spread the love