ತು.ರ.ವೇ. ಕಾಸರಗೋಡು ಜಿಲ್ಲಾಧ್ಯಕ್ಷರಾಗಿ ಭಾಸ್ಕರ ಕೆ. ಕುಂಬ್ಳೆ ಆಯ್ಕೆ

Spread the love

ತು.ರ.ವೇ. ಕಾಸರಗೋಡು ಜಿಲ್ಲಾಧ್ಯಕ್ಷರಾಗಿ ಭಾಸ್ಕರ ಕೆ. ಕುಂಬ್ಳೆ ಆಯ್ಕೆ

ಮಂಗಳೂರು: ತುಳುನಾಡ ರಕ್ಷಣಾ ವೇದಿಕೆಯ ಕಾಸರಗೋಡು ಜಿಲ್ಲಾ ಅಧ್ಯಕ್ಷರಾಗಿ ಸಂಘಟಕ ಸಾಮಾಜಿಕ ಮುಂದಾಳು ಭಾಸ್ಕರ ಕೆ.ಕುಂಬ್ಳೆ ಇವರನ್ನು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ ಶೆಟ್ಟಿ ಜೆಪ್ಪು ಅವರು ನೇಮಕಗೊಳಿಸಿದವರು.

ರಕ್ಷಣಾ ವೇದಿಕೆಯ ಕೇಂದ್ರ ಸಮಿತಿಯ ಸ್ಟೇಟ್‍ಬ್ಯಾಂಕ್‍ನಲ್ಲಿರುವ ಕಾರ್ಯಾಲಯದಲ್ಲಿ ಜರಗಿದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ತುಳು ಭಾಷೆಗೆ ಯಾವುದೇ ಗಡಿ ಎಂಬ ಪದಕ್ಕೆ ಅರ್ಥವಿಲ್ಲವೆಂದು ಭಾಸ್ಕರ ಅವರು ಅಭಿಪ್ರಾಯಪಟ್ಟರು. ತುಳುನಾಡಿನಲ್ಲಿರುವ ಎಲ್ಲ ಜಾತಿ, ಮತ, ಧರ್ಮದವರು ತುಳುವರಾಗಿದ್ದಾರೆ, ಅವರ ಐಕ್ಯತೆ ಹಾಗೂ ಅಭಿವೃದ್ಧಿ ತುಳುನಾಡ ರಕ್ಷಣಾ ವೇದಿಕೆಯ ಮುಖ್ಯ ಗುರಿ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುನಾಡ ರಕ್ಷಣಾ ವೇದಿಕೆಯ ಕೇಂದ್ರಿಯ ಮಂಡಳಿ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ವಹಿಸಿದ್ದರು. ಕೇಂದ್ರಿಯ ಮಂಡಳಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಕೇಂದ್ರಿಯ ಕೋಶಾಧಿಕಾರಿ ಅಬ್ದುಲ್ ರಶೀದ್ ಜಪ್ಪು, ಕಾಸರಗೋಡು ಜಿಲ್ಲಾ ಸಂಚಾಲಕ ಡಾ.ರಾಜೇಶ್ ಆಳ್ವ ಬದಿಯಡ್ಕ, ದ.ಕ. ಜಿಲ್ಲಾ ಯುವ ಘಟಕ ಅಧ್ಯಕ್ಷ ಹರೀಶ್ ಶೆಟ್ಟಿ ಶಕ್ತಿನಗರ, ಮಹಿಳಾ ಘಟಕ ಅಧ್ಯಕ್ಷೆ ಜ್ಯೋತಿಕ ಜೈನ್, ವಿದ್ಯಾಎಸ್. ಜೋಗಿ, ಜಿಲ್ಲಾ ಯುವ ಮಹಿಳಾ ಸಂಚಾಲಕಿ ರೇಶ್ಮ ಉಳ್ಳಾಲ್, ಗಂಗಾಧರ್ ಅತ್ತಾವರ, ಮಂಗಳೂರು ನಗರ ಯುವ ಪ್ರಧಾನ ಕಾರ್ಯದರ್ಶಿ ಹೃಷಿಕೇಶ್ ಬಿಕರ್ನಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.


Spread the love