ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಜನತಾದಳದ ವತಿಯಿಂದ ಸಂತಾಪ ಸೂಚಕ ಸಭೆ

Spread the love

ಜಿಲ್ಲಾ ಜಾತ್ಯತೀತ ಜನತಾದಳದ ವತಿಯಿಂದ ಸಂತಾಪ ಸೂಚಕ ಸಭೆ

ಮಾಜಿ ಸಚಿವ ಬಿ.ಎ.ಮೊಯ್ದಿನ್ ಅವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಜನತಾದಳದ ವತಿಯಿಂದ ಜಿಲ್ಲಾ ಕಛೇರಿಯಲ್ಲಿ ಸಂತಾಪ ಸೂಚಕ ಸಭೆ ನಡೆಯಿತು.

ಜಿಲ್ಲಾ ಅಧ್ಯಕ್ಷರಾದ ಮೊಹಮ್ಮದ್ ಕುಂಞಿ ಮಾತನಾಡಿ ಬಿ.ಎ.ಮೊಯ್ದಿನ್ ಅವರು ಹಿರಿಯ ರಾಜಕರಣಿ, ಶಿಕ್ಷಣ ತಜ್ಞ, ಅಜಾತಶತ್ರು ಆಗಿದ್ದು ಈ ರಾಜ್ಯದ ಸಣ್ಣ ಕೈಗಾರಿಕೆ ಹಾಗೂ ಉನ್ನತ ಶಿಕ್ಷಣ ಸಚಿವರಾಗಿ ವಿಶೇಷ ಸೇವೆ ಸಲ್ಲಿಸಿದ್ದಾರೆ ಮಾತ್ರವಲ್ಲ ಭ್ರಷ್ಟಚಾರಹಿತ ಉನ್ನತ ವ್ಯಕ್ತಿತ್ವ ಉಳ್ಳವರಾಗಿದ್ದರು. ಕಾರ್ಯಧ್ಯಕ್ಷರಾದ ರಾಮಗಣೇಶ್ ಮಾತನಾಡಿ ಅವರು ಪಕ್ಷದಲ್ಲಿ ಎಲ್ಲಾ ಸರ್ವಧರ್ಮದವರನ್ನು ಸಮಾನತೆಯಿಂದ ಹಾಗೂ ಗೌರವದಿಂದ ಕಾಣುತಿದ್ದರು ಎಂದು ಹೇಳಿದರು.

ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹರವರು ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಯಾವುದೇ ಸಮಸ್ಯೆಗೆ ರಾಜಕೀಯತವಾಗಿ ಸ್ಪಂದಿಸುತಿದ್ದರು. ಒಬ್ಬ ನೇರ ನುಡಿಯ ಶಿಸ್ತಿನ ಪ್ರಮಾಣಿಕ ನಡೆಯ ವ್ಯಕ್ತಿಯಾಗಿದ್ದಾರು ಇಂದು ಜಿಲ್ಲೆಯು ಹಿರಿಯ ರಾಜಕೀಯ ಮುತ್ಸದಿಯನ್ನು ಕಳೆದುಕೊಂಡಿದೆ ಎಂದು ಹೇಳಿದರು.

ಸಭೆಯಲ್ಲಿ ಹಿರಿಯ ನಾಯಕ ರಾಮಕ್ರಷ್ಣ ಶೆಟ್ಟಿ. ದಕ್ಷಿಣ ಕನ್ನಡ ಜಿಲ್ಲಾ ಯುವಜನಾತದಳ ಅಧ್ಯಕ್ಷ ಅಕ್ಶಿತ್ ಸುವರ್ಣ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರು ಸುಮತಿ ಹೆಗ್ಡೆ ಸಂತಾಪವನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ ರಾಜ್ಯಕಾರ್ಯದರ್ಶಿ ಗೋಪಾಲ್ ಕ್ರಷ್ಣ ಅತ್ತಾವರ, ಕನಕದಾಸ್ ಕುಳೂರ್, ಉಪೇಂದ್ರ ನಾಯಕ್, ಲತೀಫ್ ಒಳಚಿಲ್, ಪ್ರಕಾಶ್ ಗೋಮ್ಸ್, ಅಮೀದ್ ಬೇಂಗ್ರೆ, ಹರೀಫ್, ದಿನೇಶ್, ಭರತ್, ಶ್ರಿಮತಿ ಶಾಲಿನಿ, ಕವಿತಾ,ಶಾರದ ಉಪಸ್ಥಿತರಿದ್ದರು.


Spread the love