ಭಾರತ್ ವಿಕಾಸ್ ಪರಿಷದ್ , ದಕ್ಷಿಣ ಕನ್ನಡ , ಮಂಗಳಾ ಶಾಖೆಯ  ಪದಗ್ರಹಣ ಸಮಾರಂಭ

Spread the love

ಭಾರತ್ ವಿಕಾಸ್ ಪರಿಷದ್ , ದಕ್ಷಿಣ ಕನ್ನಡ , ಮಂಗಳಾ ಶಾಖೆಯ  ಪದಗ್ರಹಣ ಸಮಾರಂಭ

ಭಾರತ್ ವಿಕಾಸ್ ಪರಿಷದ್ , ದಕ್ಷಿಣ ಕನ್ನಡ , ಮಂಗಳಾ ಶಾಖೆಯ ಉದ್ಘಾಟನಾ ಮತ್ತು ಪದಗ್ರಹಣ ಸಮಾರಂಭವು  06 , ಜುಲೈ 2018 ರಂದು ನಗರದ ಓಷನ್ ಪರ್ಲ್ ಹೋಟೆಲ್ ನ ಸಭಾಂಗಣ ದಲ್ಲಿ ಭಾರತ್ ವಿಕಾಸ್ ಪರಿಷದ್ ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಯಾದ ಶ್ರೀ ಸುರೇಶ ಜೈನ ರವರು ನೆರವೇರಿಸಿದರು.

ಮಂಗಳಾ ಶಾಖೆ ಯ ನೂತನ ಅಧ್ಯಕ್ಷ ರಾಗಿ ಡಾ. ಸಚ್ಚಿದಾನಂದ ರೈ ರವರು ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿ ಯಾಗಿ ನಿತಿನ್ ಶೆಟ್ಟಿ ಅಗರಿ , ಖಜಾಂಚಿಯಾಗಿ ಮಾಧವ ಎಂ ಎಸ್ ಹಾಗೂ ಸಹ ಕಾರ್ಯದಶಿಯಾಗಿ ಡಾ. ಅನಂತ ಪ್ರಭು ರವರು ಪ್ರಮಾಣವಚನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಡಾ. ಸತೀಶ್ ರಾವ್ , ಮಂಗಳೂರು ಮಹಾನಗರ ಸಂಘಚಾಲಕ್ (RSS), ಹಾಗೂ ಭಾ. ವಿ. ಪ. ನ ಕರ್ನಾಟಕದ ಪ್ರಾಂತ ಕಾರ್ಯದರ್ಶಿ ಡಾ. ದೇವತಾ ಶ್ರೀನಿವಾಸ್, ಶ್ರೀ ಭಾರ್ಗವ ಎಂ. ಆರ್. ಪ್ರಾಂತ ಕಾರ್ಯದರ್ಶಿ ( ಸಂಸ್ಕಾರ) , ಶ್ರೀ ಐ, ಮೋಹನ್ , ಪ್ರಾಂತ ಕಾರ್ಯದರ್ಶಿ (ಸೇವಾ) ರವರು ಉಪಸ್ಥಿತರಿದ್ದರು.

ಭಾ. ವಿ. ಪ. ನ ಹತ್ತು ಹಲವು ಕಾರ್ಯಕ್ರಮಗಳನ್ನು ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ನೂತನ ಅಧ್ಯಕ್ಷ ರಾದ ಡಾ. ಸಚ್ಚಿದಾನಂದ ರೈ ರವರು ತಿಳಿಸಿದರು.

ಈ ಪದಗ್ರಹಣ ಸಮಾರಂಭದಲ್ಲಿ ಸುಮಾರು 50 ಜನರು ಭಾ. ವಿ. ಪ. ನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.

ಕಾರ್ಯಕ್ರಮ ವು ವಂದೇಮಾತರಂ ಗಾಯನಕ್ದೊಂದಿಗೆ ಪ್ರಾರಂಭವಾಯಿತು.

ನಿರೂಪಣೆಯು ಪ್ರೀತಿ ಶೇಣಿೈ ರವರು ನೆರವಿರಿಸಿದರು, ನೂತನ ಕಾರ್ಯದರ್ಶಿಯಾದ ನಿತಿನ್ ಶೆಟ್ಟಿ ಅಗರಿ ರವರು ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದರು.


Spread the love