ದಿಗ್ವಿಜಯ ವಾಹಿನಿ  ಉಡುಪಿ ಕ್ಯಾಮರಾ ಮ್ಯಾನ್ ಅನೀಶ್ ಡಿಸೋಜಾ ಗೆ ಬೀಳ್ಕೊಡುಗೆ

Spread the love

ದಿಗ್ವಿಜಯ ವಾಹಿನಿ  ಉಡುಪಿ ಕ್ಯಾಮರಾ ಮ್ಯಾನ್ ಅನೀಶ್ ಡಿಸೋಜಾ ಗೆ ಬೀಳ್ಕೊಡುಗೆ

ಉಡುಪಿ: ದಿಗ್ವಿಜಯ ವಾಹಿನಿಯ ಉಡುಪಿ ಕ್ಯಾಮರಾ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಸ್ತುತ ಸಿನಿಮಾಟೋಗ್ರಾಫಿಯ ಉನ್ನತ ವ್ಯಾಸಂಗಕ್ಕೆ ತೆರಳುತ್ತಿರುವ ಅನೀಶ್ ಡಿಸೋಜಾ ಅವರಿಗೆ ಉಡುಪಿ ಪ್ರೆಸ್ ಕ್ಲಬ್ ವತಿಯಿಂದ ಬೀಳ್ಕೊಡುಗೆ ಸಮಾರಂಭ ಶನಿವಾರ ಜರುಗಿತು.

ಸಮಾರಂಭದಲ್ಲಿ ಸಹದ್ಯೋಗಿ ಪತ್ರಕರ್ತರ ಮಿತ್ರರು ಅನೀಶ್ ಡಿಸೋಜಾ ಅವರ ಕರ್ತವ್ಯ ನಿಷ್ಠೆ, ಸಹೋದ್ಯೋಗಿ ಮಿತ್ರರೊಂದಿಗೆ ತೋರುತ್ತಿದ್ದ ಕಾಳಜಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಮುಂದಿನ ಉನ್ನತ ವ್ಯಾಸಂಗಕ್ಕೆ ಶುಭ ಹಾರೈಸಿದರು.

ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಅನೀಶ್ ಡಿಸೋಜಾ ಉಡುಪಿಯೊಂದಿಗಿನ ತನ್ನ ಸಂಬಂಧ ಸಹೋದ್ಯೋಗಿ ಮಿತ್ರರ ಸಹಕಾರ ಹಾಗೂ ಮುಂದಿನ ತನ್ನ ಕನಸುಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.

ಈ ವೇಳೆ ಪ್ರೆಸ್ ಕ್ಲಬ್ ಉಡುಪಿ ವತಿಯಿಂದ ಅನೀಶ್ ಡಿಸೋಜಾರಿಗೆ ಸನ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು. ಪ್ರೆಸ್ ಕ್ಲಬ್ ಉಡುಪಿ ಇದರ ಸಂಚಾಲಕ ನಾಗರಾಜ್ ರಾವ್, ವರ್ಕಾಡಿ, ಸಹಸಂಚಾಲಕ ಸುಭಾಶ್ಚಂದ್ರ ವಾಗ್ಳೆ ಉಪಸ್ಥಿತರಿದ್ದರು.

ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರರಾದ ದೀಪಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು.


Spread the love