ದೇಶ ದ್ರೋಹದ ಚಟುವಟಿಕೆಗೆ ಕ್ಷಮೆ ಇಲ್ಲ – ಸಚಿವ ಸಿ ಟಿ ರವಿ

Spread the love

ದೇಶ ದ್ರೋಹದ ಚಟುವಟಿಕೆಗೆ ಕ್ಷಮೆ ಇಲ್ಲ – ಸಚಿವ ಸಿ ಟಿ ರವಿ

ದೇಶದಲ್ಲಿ ಬೇರೆ ಎಲ್ಲದಕ್ಕೂ ಶಿಕ್ಷೆ ಹಾಗೂ ಕ್ಷಮೆ ಇದೆ ಆದರೆ ದೇಶದ್ರೋಹದ ಚಟುವಟಿಕೆಗೆ ಕ್ಷಮೆ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಶನಿವಾರ ಕಾರ್ಕಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಾಕ ಪರ ಘೋಷಣೆ ಕೂಗಿದವರನ್ನು ಕ್ಷಮಿಸಿ ಎಂದು ಯಾರು ಕೇಳಬಾರದು ಇಂತಹ ಮಾನಸಿಕತೆ ಬಹಳ ಅಪಾಯಕಾರಿಯಾಗಿದ್ದು ನಮ್ಮ ದೇಶದ ಸೈನಿಕರು ಯಾಕೆ ಗುಂಡಿಗೆ ಬಲಿಯಾಗಬೇಕು ಹಿಮಾಲಯದ ಮೈನಸ್ 20 ಡಿಗ್ರಿಯಲ್ಲಿ ಯಾಕೆ ದೇಶಕಾಯಬೇಕು ಎಂದು ಪ್ರಶ್ನಿಸಿದರು.

ಪಾಕಿಸ್ತಾನದ ಜಿಂದಾಬಾದ್ ಅಂದೋರು ಯಾರಿಗೆ ಹುಟ್ಟಿದ್ದಾರೆ? ಇಲ್ಲಿಯ ಅನ್ನ ತಿಂದು ಶತ್ರು ದೇಶದ ಗುಣಗಾನ ಮಾಡ್ತೀರಾ ಈ ಮಾನಸಿಕತೆ ಬಹಳ ಅಪಾಯಕಾರಿಯಾಗಿದ್ದು ಅಮೂಲ್ಯಳ ಹಿಂದೆ ಒಂದು ತಂಡವೇ ಇದೆ ಸ್ವತಃ ಅಮೂಲ್ಯಳೇ ಈ ವಿಷಯ ಬಹಿರಂಗಪಡಿಸಿದ್ದಾಳೆ. ಈ ಪ್ರಕರಣ ನಾವು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಅವರು ಹೇಳಿದರು.


Spread the love