ದ.ಕ ಜಿಲ್ಲೆಯ ಹಿಂದೂ ನಾಯಕರ ಬಂಧನ ಯತ್ನ ರಶ್ಯಾ ಪ್ರವಾಸ ಮೊಟಕುಗೊಳಿಸಿದ ನಳಿನ್‍ಕುಮಾರ್

Spread the love

ದ.ಕ ಜಿಲ್ಲೆಯ ಹಿಂದೂ ನಾಯಕರ ಬಂಧನ ಯತ್ನ ರಶ್ಯಾ ಪ್ರವಾಸ ಮೊಟಕುಗೊಳಿಸಿದ ನಳಿನ್‍ಕುಮಾರ್ 

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ನಾಯಕರ ಬಂಧನ ಯತ್ನ ಹಾಗೂ ಅಶಾಂತಿಯ ವಾತಾವರಣ ಮುಂದುವರಿದಿರುವ ಹಿನ್ನೆಲೆಯಲ್ಲಿ ಸಂಸದ ನಳಿನ್‍ಕುಮಾರ್ ಕಟೀಲ್ ರಶ್ಯಾ ಪ್ರವಾಸ ಮೊಟಕುಗೊಳಿಸಿ ಜು.12ರಂದೇ ಮಂಗಳೂರಿಗೆ ಆಗಮಿಸಲಿದ್ದಾರೆ.

ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ನೇತ್ರತ್ವದ ಸಂಸದೀಯ ನಿಯೋಗದ ಜತೆ ಸಂಸದರು ರಶ್ಯಾಕ್ಕೆ ತೆರಳಿದ್ದರು. 3 ದಿನಗಳ ಕಾಲ ರಶ್ಯಾ ಫೆಡರೇಶನ್‍ನ ವಿವಿಧ ಸಭೆಗಳಲ್ಲಿ ಭಾಗವಹಿಸಿ , ಜು.14ರಂದು ಭಾರತಕ್ಕೆ ಮರಳುವ ಕಾರ್ಯಕ್ರಮ ನಿಗದಿಯಾಗಿತ್ತು. ಇದೀಗ ಸ್ಪೀಕರ್ ಅವರ ಅನುಮತಿ ಪಡೆದು ನಳಿನ್‍ಕುಮಾರ್ ಕಟೀಲ್ ಮುಂಚಿತವಾಗಿಯೇ ಸ್ವದೇಶಕ್ಕೆ ಮರಳಲಿದ್ದಾರೆ.


Spread the love