ಪೋಲಿಸ್ ಅಯುಕ್ತ ಟಿ.ಕೆ ಸುರೇಶ್ ಬಿಷಪ್‍ರವರುಗಳ ಭೇಟಿ

Spread the love

ಪೋಲಿಸ್ ಅಯುಕ್ತ ಟಿ.ಕೆ ಸುರೇಶ್ ಬಿಷಪ್‍ರವರುಗಳ ಭೇಟಿ

 

ಮಹಾನಗರದ ಪೋಲಿಸ್ ಅಯುಕ್ತರಾದ ಟಿ.ಕೆ ಸುರೇಶ್ ರವರು ತಾರೀಕು 12.09.2018 ಇಬ್ಬರು ಬಿಷಪ್‍ರವರನ್ನು ಬಿಷಪ್‍ರವರ ನಿವಾಸದಲ್ಲಿ ಭೇಟಿ ಮಾಡಿದರು. ನಿಯೋಜಿತ ಬಿಷಪ್‍ರವರಿಗೆ ಮೊನ್ಸಿಂಜರ್  ಅತೀ ವಂದನೀಯ ಪೀಟರ್ ಪೌಲ್ ಸಲ್ದಾನಾರವರಿಗೆ ಹೂ ಗುಚ್ಚೆ ಕೊಟ್ಟು ಶುಭವನ್ನು ಹಾರೈಸಿದರು.  ಹಾಗೂ ಬಿಷಪ್ ಅತೀ ವಂದನೀಯ ಎಲೋಷಿಯಸ್ ಪೌಲ್ ಡಿಸೋಜರವರಿಗೆ ಹೂ ಗುಚ್ಚ ಕೊಟ್ಟು ಅವರು ಸಮಾಜಕ್ಕೆ ಕೊಟ್ಟ ಸೇವೆಗೆ ಕೃತಜ್ಜತೆಯನ್ನು ಸಲ್ಲಿಸಿದರು.

ಮಂಗಳೂರು ಧರ್ಮ ಪ್ರಾಂತ್ಯದ ಚರಿತ್ರೆ ಹಾಗೂ ಸೇವಾ ನೀಡುವ ಸಂಸ್ಥೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.  ಸೆಪ್ಟೆಂಬರ್ 15ರಂದು ಸೂಕ್ತ ಕಾನೂನು ವ್ಯವಸ್ಥೆ ಹಾಗೂ ಅದಿನದಂದು ಬೆಳಿಗ್ಗೆ ಬಿಷಪ್ ಹೌಸಿನಿಂದ ಹೊರಡುವ ಎಲ್ಲಾ ಧರ್ಮಾಧ್ಯಕ್ಷರಿಗೆ ಸೂಕ್ತ ಭದ್ರತೆಯನ್ನು ನೀಡುವುದಾಗಿ ತಿಳಿಸಿದರು.

ಛಾನ್ಸ್‍ಲರ್  ವ| ಹೆನ್ರಿ ಸಿಕ್ವೇರಾ, ಸರ್ವಾಜನಿಕ ಸಂಪರ್ಕ ಅಧಿಕಾರಿ ವ| ವಿಜಯ್ ವಿಕ್ಟರ್ ಲೋಬೊ, ರೊಜಾರಿಯೊ ಚರ್ಚಿನ ಪ್ರಧಾನ ಧರ್ಮಗುರುಗಳು ವ| ಜೆ.ಬಿ. ಕ್ರಾಸ್ತಾ, ಸಮುದಾಯದ ಮುಖಂಡರಾದ ಶ್ರೀ ಸುಶಿಲ್ ನೊರೊನ್ಹಾ, ರೊಯ್ ಕ್ಯಾಸ್ತಲಿನೊ, ಮಾರ್ಸೆಲ್ ಮೊಂತೆರೊ ಉಪಸ್ಥಿತರಿದ್ದರು


Spread the love