ಪ್ರಧಾನಿ ಮೋದೀಜಿಯವರ ಪುನರಾಯ್ಕೆ ಮಾಡುವಲ್ಲಿ ಶ್ರಮಿಸಿ : ಡಾ.ಭರತ್ ಶೆಟ್ಟಿ 

Spread the love

ಪ್ರಧಾನಿ ಮೋದೀಜಿಯವರ ಪುನರಾಯ್ಕೆ ಮಾಡುವಲ್ಲಿ ಶ್ರಮಿಸಿ : ಡಾ.ಭರತ್ ಶೆಟ್ಟಿ 

ಮಂಗಳೂರು: ವಿಶ್ವದಲ್ಲೇ ಭಾರತವು ಜಗದ್ಗುರು ಸ್ಥಾನವನ್ನು ಪಡೆಯಬೇಕಾದರೆ ಪ್ರಧಾನಿ ಮೋದೀಜಿಯವರ ಪುನರಾಯ್ಕೆ ಮಾಡುವಲ್ಲಿ ಶ್ರಮಿಸಬೇಕಾಗಿದೆ ಎಂದು ಮಂಗಳೂರು ನಗರ ಉತ್ತರದ ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.

ಅವರು ಸುರತ್ಕಲ್ ನಲ್ಲಿ ಭಾರತೀಯ ಜನತಾ ಪಾರ್ಟಿಯ ಚುನಾವಣಾ ನಿರ್ವಹಣಾ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದ ಪ್ರೊ. ಬಾಲಕೃಷ್ಣ ಭಟ್ ರವರು ಮೋದೀಜಿಯವರ ನೇತೃತ್ವದ ಕಳೆದ ಐದು ವರ್ಷ ಆಡಳಿತ ನಡೆಸಿದ ಸರಕಾರದ ಸಾಧನೆ- ಯೋಜನೆಗಳು ಬಡವರ ಶೋಷಿತರ ದೀನದಲಿತರ ಪಾಲಿಗೆ ಆಶಾಕಿರಣವಾಗಿದೆ ಎಂದರು.

ಉದ್ಯಮಿ ಹರೀಶ್ ಶೆಟ್ಟಿ ಮದ್ಯ, ಗುರುಪ್ರಸಾದ್ ಸಿರಿ, ಪಕ್ಷದ ಪ್ರಮುಖರಾದ ಗಣೇಶ ಹೊಸಬೆಟ್ಟು, ಶರತ್ ಚಂದ್ರ ಶೆಟ್ಟಿ, ಎಂ.ಟಿ.ಸಾಲಿಯಾನ್, ಕು.ಸುಮಿತ್ರಾ, ಮಹೇಶ್ ಮೂರ್ತಿ ಸುರತ್ಕಲ್, ಭರತ್ ರಾಜ್ ಕೃಷ್ಣಾಪುರ, ಗಂಗಾಧರ ಸನಿಲ್, ರಾಘವೇಂದ್ರ ಶೆಣೈ ತಿಲಕ್ ರಾಜ್ ಚೊಕ್ಕಬೆಟ್ಟು ಮುಂತಾದವರು ಉಪಸ್ಥಿತರಿದ್ದರು.

ಮಹಾಶಕ್ತಿಕೇಂದ್ರ ಸುರತ್ಕಲ್ 1ರ ಅಧ್ಯಕ್ಷ ಲೋಕೇಶ್ ಬೊಳ್ಳಾಜೆ ಸ್ವಾಗತಿಸಿ ಮಹಾಶಕ್ತಿಕೇಂದ್ರ ಸುರತ್ಕಲ್ 2 ರ ಅಧ್ಯಕ್ಷ ವಿಠಲ ಸಾಲಿಯಾನ್ ವಂದಿಸಿದರು. ದಿನಕರ ಇಡ್ಯಾ ಕಾರ್ಯಕ್ರಮ ನಿರೂಪಿಸಿದರು.


Spread the love