ಬಂಗಾರ್ ಭಟ್ರ್ ಖ್ಯಾತಿಯ ಕೆಮುಂಡೆಲು ಅನಂತಪದ್ಮನಾಭ ಜೆನ್ನಿ ಇವರಿಗೆ ದಕ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

Spread the love

ಬಂಗಾರ್ ಭಟ್ರ್ ಖ್ಯಾತಿಯ ಕೆಮುಂಡೆಲು ಅನಂತಪದ್ಮನಾಭ ಜೆನ್ನಿ ಇವರಿಗೆ ದಕ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ

ಮಂಗಳೂರು: ಸಾರ್ವಜನಿಕರಿಂದ ಬಂಗಾರ್ ಭಟ್ರ್ ಎಂದೇ ಗುರುತಿಸಲ್ಪಟ್ಟ ಕೆಮುಂಡೆಲು ಅನಂತಪದ್ಮನಾಭ ಜೆನ್ನಿ ಇವರಿಗೆ 2020ರ ಸಾಲಿನ ದಕ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕಳೆದ ಎರಡು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಅನಂತಪದ್ಮನಾಭ ಅವರು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಈವರಗೆ ನಿರ್ವಹಿಸಿಕೊಂಡು ಬಂದಿದ್ದಾರೆ. ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡುತ್ತಿರುವ ಇವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ದಕ ಇದರ ವತಿಯಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ


Spread the love