ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ: ಪತ್ರಕರ್ತನ ಮೇಲೆ 16 ಕೇಸು

Spread the love

ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ: ಪತ್ರಕರ್ತನ ಮೇಲೆ 16 ಕೇಸು

ಕುಂದಾಪುರ: ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಪತ್ರಕರ್ತ ಚಂದ್ರ ಕೆ.ಹೆಮ್ಮಾಡಿ ಮೇಲೆ ಶನಿವಾರ ಮತ್ತೆ 5 ದೂರು ದಾಖಲಾಗಿದೆ. ಬೈಂದೂರು ಠಾಣೆಯಲ್ಲಿ 3, ಗಂಗೊಳ್ಳಿ ಹಾಗೂ ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ತಲಾ 1 ದೂರು ದಾಖಲಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 16ಕ್ಕೇರಿದೆ.

ಚಂದ್ರ ಕೆ.ಹೆಮ್ಮಾಡಿ ಮೇಲೆ ಬೈಂದೂರು ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾದ ಬಳಿಕ ಈವರೆಗೆ 14 ದೂರು ದಾಖಲಾಗಿದ್ದು, ಗಂಗೊಳ್ಳಿ ಹಾಗೂ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ತಲಾ ಒಂದು ದೂರು ದಾಖಲಾಗಿದೆ. ಕಪ್ಪಾಡಿ, ಆಲೂರು, ಹೆಮ್ಮಾಡಿ, ಕಂಡ್ಲೂರು, ಗಂಗೊಳ್ಳಿ ಪರಿಸರದ 16 ಬಾಲಕರು ದೂರು ನೀಡಿದ್ದು, ಇನ್ನಷ್ಟು ದೂರು ದಾಖಲಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ರಕರ್ತ ಚಂದ್ರ ಹೆಮ್ಮಾಡಿ ಆಕಾಶವಾಣಿ ಗಾಯಕನಾಗಿದ್ದು, ವಂಡ್ಸೆಯಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷ ಹುದ್ದೆಯಲ್ಲಿ ಗುರುತಿಸಿಕೊಂಡಿದ್ದ. ಇತ್ತೀಚೆಗೆ ಗಣ್ಯವ್ಯಕ್ತಿಗಳಿಗೆ ಬ್ಲಾಕ್‌ಮೆಲ್ ಮಾಡಿದ ಆಡಿಯೋ ಕ್ಲಿಪ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಈತ ವಿವಾಹಿತನಾಗಿದ್ದು, ಪುಟ್ಟ ಮಗುವೂ ಇದೆ.


Spread the love