ಭಟ್ಕಳ ಖಾಝಿಯಿದ್ದ ಕಾರನ್ನು ಅಡ್ಡಗಟ್ಟಿ ತಂಡದಿಂದ ಜೈ ಶ್ರೀರಾಂ ಘೋಷಣೆ : ಪ್ರಕರಣ ದಾಖಲು

Spread the love

ಭಟ್ಕಳ ಖಾಝಿಯಿದ್ದ ಕಾರನ್ನು ಅಡ್ಡಗಟ್ಟಿ ತಂಡದಿಂದ ಜೈ ಶ್ರೀರಾಂ ಘೋಷಣೆ : ಪ್ರಕರಣ ದಾಖಲು

ಬೈಂದೂರು : ಭಟ್ಕಳ ಖಾಝಿವರಿದ್ದ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡವೊಂದು ಅವಾಚ್ಯವಾಗಿ ನಿಂದಿಸಿ, ಜೈ ಶ್ರೀರಾಂ ಘೋಷಣೆ ಕೂಗಿದ ಘಟನೆ ಶುಕ್ರವಾರ ಸಂಜೆ 5:30ರ ಸುಮಾರಿಗೆ ಬಿಜೂರಿನಲ್ಲಿ ನಡೆದಿರುವ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಟ್ಕಳ ಖಾಝಿ ಮೌಲಾನಾ ಇಕ್ಬಾಲ್ ಮುಲ್ಲಾ ನದ್ವಿ ಅವರು ಶುಕ್ರವಾರ ಸಂಜೆ ಕುಂದಾಪುರದ ಕಂಡ್ಲೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಖಾಝಿ ಹಾಗೂ ಕೆಲವರಿದ್ದ ಕಾರು ಭಟ್ಕಳ ಸಮೀಪ ಬೇರೊಂದು ಕಾರಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಈ ವಿಚಾರವಾಗಿ ಮಾತಿನ ಚಕಮಕಿ ನಡೆದಿದ್ದು, ಬಳಿಕ ಮಾತುಕತೆಯ ಮೂಲಕ ಅದನ್ನು ಪರಿಹರಿಸಿಕೊಳ್ಳಲಾಗಿತ್ತು. ಬಳಿಕ ಅಲ್ಲಿಂದ ಹೊರಟ ಖಾಝಿವರಿದ್ದ ಕಾರನ್ನು ಬೈಂದೂರು ಠಾಣೆ ವ್ಯಾಪ್ತಿಯ ಬಿಜೂರಿನ ಪಿಜಿ ಬಳಿ ಐವರಿದ್ದ ತಂಡವೊಂದು ಅಡ್ಡಗಟ್ಟಿದೆ. ಈ ವೇಳೆ ಅಡ್ಡಗಟ್ಟಿದ ತಂಡವು ಜೋರಾಗಿ ‘ಜೈ ಶ್ರೀರಾಂ’ ಘೋಷಣೆ ಕೂಗಿ ಅವಾಚ್ಯವಾಗಿ ನಿಂದಿಸಿದೆ ಮತ್ತು ಕಾರಿಗೆ ಕಾಲಿನಿಂದ ಒದ್ದು ಹಾನಿಗೊಳಿಸಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love