ಭಾರತ ಸೇವಾದಳದ ವತಿಯಿಂದ ಮಾಧಮಯ್ಯರವರಿಗೆ ಶೃದ್ಧಾಂಜಲಿ ಸಭೆ

Spread the love

ಭಾರತ ಸೇವಾದಳದ ವತಿಯಿಂದ ಮಾಧಮಯ್ಯರವರಿಗೆ ಶೃದ್ಧಾಂಜಲಿ ಸಭೆ

ಮಂಗಳೂರು : ಇತ್ತೀಚೆಗೆ ನಿಧನ ಹೊಂದಿದ ಎ.ಕೆ.ಯು. ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಹಾಗೂ ಭಾರತ ಸೇವಾದಳದ ಶಾಖಾ ನಾಯಕರಾಗಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿರುವ ದಿವಂಗತ ಮಾಧ ಮಯ್ಯರವರಿಗೆ ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ಮಂಗಳೂರು ತಾಲೂಕು ಸಮಿತಿಯ ವತಿಯಿಂದ ಭಾರತ ಸೇವಾ ದಳ ಜಿಲ್ಲಾ ಕಛೇರಿಯಲ್ಲಿ ಸಭೆ ಸೇರಿ ಭಾವಪೂರ್ಣ ಶೃದ್ಧಾಂಜಲಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಮಿತಿಯ ಸದಸ್ಯ ಶ್ರೀ ಆಲ್ಪೋನ್ಸ್ ಫ್ರಾಂಕ್ ಹಾಗೂ ಜಿಲ್ಲಾಧ್ಯಕ್ಷ ಶ್ರೀ ಬಶೀರ್ ಬೈಕಂಪಾಡಿ, ತಾಲೂಕು ಅಧ್ಯಕ್ಷ ಶ್ರೀ ಪ್ರಭಾಕರ ಶ್ರೀಯಾನ್ ರವರು ದಿವಂಗತ ಮಾಧಮಯ್ಯ ರವರ ಸೇವಾದಳದ ಕಾರ್ಯಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ನಿವೃತ್ತರಾದ ಬಳಿಕವೂ ಸೇವಾದಳದ ನಂಟನ್ನು ಬಿಡದೆ ಈ ನಿಸ್ವಾರ್ಥ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದ ಮಾಧಮಯ್ಯರವರಿಗೆ ನುಡಿ ನಮನ ಸಲ್ಲಿಸಿದರು.

. ಈ ಸಂದರ್ಭದಲ್ಲಿ ತಾಲೂಕು ಸಮಿತಿಯ ಉಪಾಧ್ಯಕ್ಷ ಶ್ರೀ ಉದಯ ಕುಂದರ್, ಕಾರ್ಯದರ್ಶಿ ಶ್ರೀಮತಿ ರೆಹನಾ, ಖಜಾಂಚಿ ಕೃತಿನ್ ಕುಮಾರ್, ಶ್ರೀ ಸುರೇಶ್ ಶೆಟ್ಟಿ, ಶ್ರೀ ಪ್ರೇಮ್‍ಚಂದ್, ಜಿಲ್ಲಾ ಸಂಘಟಕ ಮಂಜೇಗೌಡ, ಶಾಖಾ ನಾಯಕಿ ಶ್ರೀಮತಿ ಶಾಂತಿ ಮೊದಲಾದವರು ಉಪಸ್ಥಿತರಿದ್ದರು.


Spread the love