ಮಂಗಳೂರಿನ ಜನತೆಗೆ ತುಳುವಿನಲ್ಲಿ ದೀಪಾವಳಿ ಶುಭಾಶಯ ಕೋರಿದ ಕಮೀಷನರ್ ಡಾ|ಹರ್ಷ

Spread the love

ಮಂಗಳೂರಿನ ಜನತೆಗೆ ತುಳುವಿನಲ್ಲಿ ದೀಪಾವಳಿ ಶುಭಾಶಯ ಕೋರಿದ ಕಮೀಷನರ್ ಡಾ|ಹರ್ಷ

ಮಂಗಳೂರು: ಸದಾ ತನ್ನ ನೇರ ನಡೆ ನುಡಿ ಮತ್ತು ಉತ್ತಮ ಕಾರ್ಯಕ್ರಮಗಳಿಂದ ಹೆಸರುವಾಸಿಯಾಗಿರುವ ಮಂಗಳೂರ ನಗರ ಪೊಲೀಸ್ ಕಮೀಷನರ್ ಡಾ|ಹರ್ಷ ಪಿ ಎಸ್ ಅವರು ನಗರದ ಜನತೆಗೆ ತುಳುವಿನಲ್ಲಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿ ಜನರ ಮನಸ್ಸನ್ನು ಗೆದ್ದಿದ್ದಾರೆ.

“ಪ್ರತೀ ವರ್ಷ ಯಾನ್ ಎನ್ನ ಪರಿವಾರದೊಟ್ಟುಗು ತುಡರ್ ಪರ್ಬೊನು ಆಚರಣೆ ಮಲ್ತೊಂದಿತ್ತೆ., ಈ ಸರ್ತಿ ಕುಡ್ಲನೇ ಎನ್ನ ಇಲ್ಲ್.. ಕುಡ್ಲದಕುಲೇ ಎನ್ನ ಪರಿವಾರ ಎನ್ನೊಂದು ತುಡರ್ ಪರ್ಬೊನು ಆಚರಣೆ ಮಲ್ತೊಂದುಲ್ಲೆ. ಈ ತುಡರ್ ಪರ್ಬ ಮಾತೆರ್ನ ಜೀವನೊಡು ಬೊಲ್ಪು ಕನವಡ್. ಕುಡ್ಲದ ಮಾತ ಜನಕ್ಲೆಗ್ “ತುಡರ್ ಪರ್ಬದ ಉಡಲ್ ದಿಂಜಿನ ಮೋಕೆದ ಎಡ್ಡೆಪ್ಪು”. (ಪ್ರತಿ ವರ್ಷ ನಾನು ನನ್ನ ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನು ಆಚರಣೆ ಮಾಡುತ್ತಿದ್ದೆ. ಈ ಬಾರಿ ನನಗೆ ಮಂಗಳೂರೇ ನನ್ನ ಮನೆ, ಮಂಗಳೂರಿಗರೇ ನನ್ನ ಪರಿವಾರ ಎಂದು ನಂಬಿ ದೀಪಾವಳಿ ಆಚರಣೆ ಮಾಡುತ್ತಿದ್ದೇನೆ. ಈ ಬೆಳಕಿನ ಹಬ್ಬ ಎಲ್ಲರ ಜೀವನದಲ್ಲಿ ಬೆಳಕನ್ನು ತರಲಿ. ಮಂಗಳೂರಿನ ಮಹಾ ಜನತೆಗೆ ದೀಪಾವಳಿ ಹಬ್ಬಕ್ಕೆ ಪ್ರೀತಿಯ ಶುಭ ಹಾರೈಕೆಗಳು) ಎಂದು ತುಳುವಿನಲ್ಲಿ ಅವರು ಶುಭ ಹಾರೈಸಿದ್ದಾರೆ.


Spread the love