ಮಂಗಳೂರು: ನೈಸರ್ಗಿಕ ಸಿದ್ದ ವಸ್ತುಗಳ ಆಹಾರ ಮಳಿಗೆಯಲ್ಲಿ ಸತ್ತ ಜಿರಳೆಗಳು; ಮಳಿಗೆಗೆ ಬೀಗ ಜಡಿದ ಆರೋಗ್ಯಾಧಿಕಾರಿಗಳು

Spread the love

ಮಂಗಳೂರು:  ಜೈಲು ರಸ್ತೆ ಬಳಿಯಿರುವ ಸತ್ವಂ ಆರ್ಗಾನಿಕ್ ಹೆಸರಿನ ನೈಸರ್ಗಿಕ ಸಿದ್ದ ವಸ್ತುಗಳ ಆಹಾರ ಮಳಿಗೆಗೆ ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಸೋಮವಾರ ದಿಢೀರ್ ಧಾಳಿ ನಡೆಸಿದ್ದಾರೆ.

health-officers-raid (1) health-officers-raid (2)

ಆರೋಗ್ಯಾಧಿಕಾರಿ ಡಾ,ಮಂಜಯ್ಯ ಶೆಟ್ಟಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಮಳಿಗೆಗೆ ಬೀಗ ಜಡಿದಿದ್ದಾರೆ.ತಿನ್ನುವ ಆಹಾರ ವಸ್ತುಗಳಿರುವ ಮಳಿಗೆಯಲ್ಲಿ ಜಿರಳೆಗಳಿಗಾಗಿ ಔಷಧಿ ಸಿಂಪಡಿಸಿದ ಕಾರಣ ರಾಶಿ ರಾಶಿ ಜಿರಳೆಗಳು ಸತ್ತು ಮಳಿಗೆಯ ಅಕ್ಕ ಪಕ್ಕದಲ್ಲಿ ಬಿದ್ದಿದ್ದವು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪಾಲಿಕೆಯ ಆರೋಗ್ಯಾಧಿಕಾರಿಗಳಿಗೆ ದೂರು ನೀಡಿದ್ದರು

ಮಳಿಗೆಯ ಸ್ವಚ್ಚತೆಯ ಬಗ್ಗೆ ಪರಿಶೀಲನೆ ನಡೆಸಲು ಬಂದ ಆರೋಗ್ಯ ಅಧಿಕಾರಿಗಳೇ ರಾಶಿ ರಾಶಿ ಜಿರಳೆಗಳನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.ಮಳಿಗೆಯ ಮಾಲಕರಿಗೆ ಮಳಿಗೆಯನ್ನು ಮುಂಚುವಂತೆ ಸೂಚಿಸಿರುವ ಅಧಿಕಾರಿಗಳು ಇಷ್ಟೊಂದು ಪ್ರಮಾಣದಲ್ಲಿ ಜಿರಳೆಗಳಿದ್ದರೂ ಆಹಾರ ಮಳಿಗೆಯಲ್ಲಿ ಸ್ವಚ್ಚತೆ ಬಗ್ಗೆ ನಿಗಾಹರಿಸದ ಹಿನ್ನೆಲೆಯಲ್ಲಿ ನೋಟೀಸ್ ಜಾರಿ ಮಾಡಿದ್ದಾರೆ.

ಆದರೆ ಸಂಜೆ ವೇಳೆಗೆ ಮತ್ತೆ ಅಂಗಡಿಯನ್ನು ಇನ್ನೊಂದು ಕೀ ಮೂಲಕ ತೆರೆದು ಸಾರ್ವಜನಿಕರಿಗೆ ಮತ್ತೆ ಆಹಾರ ಪೂರೈಸುತ್ತಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತೆ ಧಾಳಿ ನಡೆಸಿ ಮಳಿಗೆಗೆ ಬೀಗ ಜಡಿದು ಕ್ರಮ ತೆಗೆದುಕೊಂಡಿದ್ದಾರೆ. ಅಲ್ಲದೆ ಮಳಿಗೆಯನ್ನು ತೆರೆಯದಂತೆ ಅಧಿಕಾರಿಗಳ ಸ್ಪಷ್ಟ ಆದೇಶವಿದ್ದರೂ ಮಾಲಕ ಮಳಿಗೆ ತೆರೆದು ಮತ್ತೆ ಉದ್ದಟತನ ತೋರಿರುವುದರ ವಿರುದ್ದ ಅಧಿಕಾರಿಗಳು ಮಾಲಕನನ್ನು ಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.


Spread the love