ಮಂಗಳೂರು ಮಹಾನಗರಪಾಲಿಕೆ ಆ.29 ರಂದು ನೀರು ಪೂರೈಕೆ ಸ್ಥಗಿತ

Spread the love

ಮಂಗಳೂರು ಮಹಾನಗರಪಾಲಿಕೆ ಆ.29 ರಂದು ನೀರು ಪೂರೈಕೆ ಸ್ಥಗಿತ

ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ರೇಚಕ ಸ್ಥಾವರದ ಜಾಕ್‍ವೆಲ್‍ನಲ್ಲಿ ಮರಳು, ಕಸಕಡ್ಡಿಗಳು, ಮಡ್ಡಿ ಇತ್ಯಾದಿಗಳು ಶೇಖರಣೆಗೊಂಡಿದ್ದು, ನೀರೆತ್ತುವ ಪಂಪ್ ಚಾಲನೆಯಲ್ಲಿ ಅಡೆತಡೆ ಉಂಟಾಗುತ್ತಿರುವುದನ್ನು ಸರಿಪಡಿಸಲು, ಜಾಕ್‍ವೆಲ್‍ನ್ನು ಶುಚಿಗೊಳಿಸಲು ಹಾಗೂ ಎನ್.ಆರ್.ವಿ ದುರಸ್ಥಿಗೊಳಿಸಲು ಆಗಸ್ಟ್ 29 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರಗೆ ಹಮ್ಮಿಕೊಳ್ಳಲಾಗಿದೆ. ಸದ್ರಿ ಅವಧಿಯಲ್ಲಿ ಪಡೀಲ್ ರೇಚಕ ಸ್ಥಾವರದಿಂದ ನೀರು ಸರಬರಾಜಾಗುವ ಮಂಗಳೂರು ನಗರ ಭಾಗಶಃ ಪ್ರದೇಶ, ಕಾರ್‍ಸ್ಟ್ರೀಟ್, ಮೇರಿಹಿಲ್, ಮಂಗಳಾದೇವಿ, ಬೋಳಾರ, ಮಣ್ಣಗುಡ್ಡ, ಮುಳಿಹಿತ್ಲು, ಪಾಂಡೇಶ್ವರ, ಸ್ಟೇಟ್‍ಬ್ಯಾಂಕ್ ಇತ್ಯಾದಿ ಪ್ರದೇಶಗಳಲ್ಲಿ ನೀರು ವಿತರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ಆಯುಕ್ತರು ಮಹಾನಗರಪಾಲಿಕೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.


Spread the love