ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ -ಶಿಸ್ತು ಸಮಿತಿ  ನೇಮಕ

Spread the love

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ -ಶಿಸ್ತು ಸಮಿತಿ  ನೇಮಕ

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯು ಸಂಪನ್ನಗೊಂಡಿದ್ದು, ಅದರ ಕುರಿತು ಸಮಗ್ರ ವರದಿಯೊಂದನ್ನು ಜಿಲ್ಲಾ ಕಾಂಗ್ರೆಸ್‍ಗೆ ಒಪ್ಪಿಸಲು ಶಿಸ್ತು ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಈ ಕೆಳಗಿನ ಸಮಿತಿಯೊಂದಿಗೆ ರಚಿಸಲಾಗಿದೆ.
1.  ಬಿ.ಇಬ್ರಾಹಿಂ, ಮಾಜಿ ರಾಜ್ಯಸಭಾ ಸದಸ್ಯರು (ಅಧ್ಯಕ್ಷರು)
2. ಕೆ.ಅಭಯಚಂದ್ರ ಜೈನ್, ಮಾಜಿ ಸಚಿವರು (ಸಹ ಅಧ್ಯಕ್ಷರು)
3. ದಿನೇಶ್ ಆಳ್ವ, ಕಾರ್ಯಕಾರಿಣಿ ಸಮಿತಿ ಸದಸ್ಯರು, ದ.ಕ ಜಿಲ್ಲಾ ಕಾಂಗ್ರೆಸ್ (ಸದಸ್ಯರು)
4. ಭರತ್ ಮುಂಡೋಡಿ, ಮಾಜಿ ಕೆ.ಪಿ.ಸಿ.ಸಿ ಕಾರ್ಯದರ್ಶಿ (ಸದಸ್ಯರು)
5. ಉಷಾ ಅಂಚನ್, ಕಾರ್ಯದರ್ಶಿ, ದ.ಕ ಜಿಲ್ಲಾ ಕಾಂಗ್ರೆಸ್ (ಸದಸ್ಯರು)

ಇವರುಗಳನ್ನು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ  ಕೆ.ಹರೀಶ್ ಕುಮಾರ್‍ರವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಕಛೇರಿ ಕಾರ್ಯದರ್ಶಿ  ನಝೀರ್ ಬಜಾಲ್‍ರವರು  ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love