ಮಂಜುನಾಥ್ ಕಾಮತ್ ಅವರ ‘ನಾನು ಸನ್ಯಾಸಿಯಾಗಲು ಹೊರಟಿದ್ದೆ’ ಪುಸ್ತಕದ ಮುಖಪುಟ ಅನಾವರಣ

Spread the love

ಮಂಜುನಾಥ್ ಕಾಮತ್ ಅವರ ‘ನಾನು ಸನ್ಯಾಸಿಯಾಗಲು ಹೊರಟಿದ್ದೆ’ ಪುಸ್ತಕದ ಮುಖಪುಟ ಅನಾವರಣ

ಉಡುಪಿ: ಲೇಖಕ ಮಂಜುನಾಥ್ ಕಾಮತ್ ಅವರ ‘ನಾನು ಸನ್ಯಾಸಿಯಾಗಲು ಹೊರಟಿದ್ದೆ’ ಪುಸ್ತಕದ ಮುಖಪುಟವನ್ನು ನಾವಿಕ ಸತ್ಯಣ್ಣ ಅವರು ಬುಧವಾರ ಕೆಮ್ಮಣ್ಣು ಪಡುಕುದ್ರು ತೂಗು ಸೇತುವೆಯ ಬಳಿ ಅನಾವರಣಗೊಳಿಸಿದರು.

ಲೇಖಕ ಮಂಜುನಾಥ ಕಾಮತ್‌ ಮಾತನಾಡಿ, ಸೀತಾ ಮತ್ತು ಸುವರ್ಣಾ ನದಿ ಒಟ್ಟಾಗಿ ಸಮುದ್ರ ಸೇರುವ ಜಾಗದಲ್ಲಿ ಅನೇಕ ಸುಂದರ ಕುದ್ರುಗಳಿವೆ. ಕೇರಳ ಮಾದರಿಯಲ್ಲಿ ಇಲ್ಲಿಯೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಬಹುದಾಗಿದೆ. ಈ ಕುರಿತು ಬೆಳಕು ಚೆಲ್ಲುವ ಸಲುವಾಗಿ ಮುಖಪುಟವನ್ನು ಉಡುಪಿಯ ಕೆಮ್ಮಣ್ಣು ಸಮೀಪದ ದ್ವೀಪಗಳ ಪರಿಸರದಲ್ಲಿ ವಿಭಿನ್ನವಾಗಿ ಬಿಡುಗಡೆಗೊಳಿಸಲಾಯಿತು ಎಂದರು.

ಪ್ರವಾಸ, ವೃತ್ತಿ, ಹಳ್ಳಿಗರ ಒಡನಾಟದ ಅನುಭವವನ್ನು ಲೇಖಕ ಮಂಜುನಾಥ ಕಾಮತ್‌ ಅವರ ಹಿಂದಿನ ಕೃತಿ ‘ದಾರಿ ತಪ್ಪಿಸು ದೇವರೇ’ ಮೂರು ಆವೃತ್ತಿಗಳನ್ನು ಕಂಡಿದೆ.


Spread the love