ಮಕ್ಕಳ ಅಪಹರಣ ಹೆಸರಿನಲ್ಲಿ ವಂದಂತಿ ಹರಡುವವರ ವಿರುದ್ದ ಕ್ರಮ: ಕಮೀಷನರ್ ಚಂದ್ರಶೇಖರ್

Spread the love

ಮಕ್ಕಳ ಅಪಹರಣ ಹೆಸರಿನಲ್ಲಿ ವಂದಂತಿ ಹರಡುವವರ ವಿರುದ್ದ ಕ್ರಮ: ಕಮೀಷನರ್ ಚಂದ್ರಶೇಖರ್

ಮಂಗಳೂರು: ಜಿಲ್ಲೆಯಲ್ಲಿ ಮಕ್ಕಳನ್ನು ಅಪಹರಿಸುವ ತಂಡ ಇದೆ ಎಂದು ಸುಳ್ಳು ವಾಟ್ಸ್ ಆಪ್ ಸುದ್ದಿ ಹರಡಿಸುತ್ತಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಮೀಷನರ್ ಚಂದ್ರಶೇಖರ್ ಎಚ್ಚರಿಕೆ  ನೀಡಿದ್ದಾರೆ.

ಕಳೆದ ಸೋಮವಾರ ಕೈರಂಗಳದಲ್ಲಿ ಮದ್ರಸಾ ವಿದ್ಯಾರ್ಥಿಯೋರ್ವನಿಗೆ ದುಷ್ಕರ್ಮಿಗಳು ಅಪಹರಣಕ್ಕೆ ಯತ್ನಿಸಿದ ಬಳಿಕ ವಾಟ್ಸ್ ಆ್ಯಪ್ ಮತ್ತಿತರ ಸಾಮಾಜಿ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಬರಹಗಳು ಹರಿಯುತ್ತಿದ್ದು ಇದರಿಂದ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ.

ಈ ಕುರಿತು ಜನರಿಗೆ ಎಚ್ಚಿರಕೆ ನೀಡಿದರುವ ನಗರ ಆಯುಕ್ತ ಚಂದ್ರಶೇಖರ್ ಅವರು ವಾಟ್ಸ್ ಆ್ಯಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಸಾಮಾಜಿಕ ಶಾಂತಿಗೆ ಭಂಗ ತರುವ ಯಾವುದೇ ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸುವವರ ಬಗ್ಗೆ ದೂರು ಬಂದಲ್ಲಿ ಅಂತಹ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


Spread the love