ಮನವಿಗೆ ಸ್ಪಂದಿಸಿದ ಮೆಸ್ಕಾಂ ಇಲಾಖೆ: ಸಂತೋಷ್ ನಗರಕ್ಕೆ ಹೊಸ ಟ್ರಾನ್ಸ್ ಫಾರ್ಮರ್ ಅಳವಡಿಕೆ

Spread the love

ಮನವಿಗೆ ಸ್ಪಂದಿಸಿದ ಮೆಸ್ಕಾಂ ಇಲಾಖೆ: ಸಂತೋಷ್ ನಗರಕ್ಕೆ ಹೊಸ ಟ್ರಾನ್ಸ್ ಫಾರ್ಮರ್ ಅಳವಡಿಕೆ

ಕುಂದಾಪುರ: ಬೈಂದೂರು ತಾಲೂಕಿನ ಹೆಮ್ಮಾಡಿ ಗ್ರಾಮದ ಸಂತೋಷ್ ನಗರದಲ್ಲಿರುವ ಸುಮಾರು 120 ಮನೆಗಳಿಗೆ ಹಳೆಯ ವಿದ್ಯುತ್ ಟ್ರಾನ್ಸ್ ಫರ್ ನಿಂದಾಗಿ ಸಮಸ್ಯೆಯಾಗುತ್ತಿದ್ದು ಮೆಸ್ಕಾಂ ಇಲಾಖೆ ಹೊಸ ಟ್ರಾನ್ಸ್ ಫಾರ್ಮರ್ ಅಳವಡಿಸುವ ಮೂಲಕ ನೆರವಾಗಿದೆ ಎಂದು ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಸೈಯ್ಯದ್ ಫುರ್ಖಾನ್ ಯಾಸೀನ್ ಹೇಳಿದ್ದಾರೆ.

ಹೆಮ್ಮಾಡಿ ಗ್ರಾಮದ ಸಂತೋಷ್ ನಗರದ ನಿವಾಸಿಗಳಿಗೆ ಹಳೆಯ ಟ್ರಾನ್ಸ್ ಫಾರ್ಮರ್ ನಿಂದಾಗಿ ಮನೆಯಲ್ಲಿನ ವಿದ್ಯುತ್ ಸಾಮಾಗ್ರಿಗಳು ಆಗಿಂದಾಗ್ಗೆ ಹಾಳಾಗುತ್ತಿದ್ದು ಈ ಕುರಿತು ಕಳೆದ ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಸೈಯ್ಯದ್ ಫುರ್ಖಾನ್ ಯಾಸೀನ್ ಅವರು ಮೆಸ್ಕಾಂ ಅಧಿಕಾರಿಗಳ ಗಮನವನ್ನು ಸೆಳೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮೆಸ್ಕಾಂ ಇಂಜಿನಿಯರ್ ಆದಷ್ಟು ಬೇಗ ಸಂತೋಷ್ ನಗರ ನಿವಾಸಿಗಳ ಸಮಸ್ಯೆಯನ್ನು ಬಗೆ ಹರಿಸುವ ಭರವಸೆ ನೀಡಿದ್ದರು. ಅದರಂತೆ ಮೆಸ್ಕಾಂ ಇಲಾಖೆ ಹೊಸ ಟ್ರಾನ್ಸ್ ಫಾರ್ಮರನ್ನು ಅಳವಡಿಸಿದ್ದು ಈ ಭಾಗದ ನಿವಾಸಿಗಳ ಸಮಸ್ಯೆ ಬಗೆಹರಿದಂತಾಗಿದೆ.

ಶೀಘ್ರವಾಗಿ ಸ್ಪಂದಿಸುವ ಮೂಲಕ ಸಂತೋಷ್ ನಗರ ನಿವಾಸಿಗಳ ನೆರವಿಗೆ ಬಂದ ಮೆಸ್ಕಾಂ ಜ್ಯೂನಿಯರ್ ಇಂಜಿನಿಯರ್ ಹಾಗೂ ಸಿಬಂದಿಗಳಿಗೆ ಉಡುಪಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಸೈಯ್ಯದ್ ಫುರ್ಖಾನ್ ಯಾಸೀನ್ ಕೃತಜ್ಞತೆ ಸಲ್ಲಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments