ಮರಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರ ಸಾವು

Spread the love

ಮರಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರ ಸಾವು

ಕಾರ್ಕಳ: ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ದಾರುಣವಾಗಿ ಸಾವನಪ್ಪಿದ ಘಟನೆ ಕುಕ್ಕುಂದೂರು ಗ್ರಾಮದ ಜೋಡುರಸ್ತೆಯಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ.
ಮೃತರನ್ನು ನಿಟ್ಟೆ ಗ್ರಾಮದ ಅತ್ತೂರು ಪದವು ನಿವಾಸಿ ಅರುಣ ನಾಯ್ಕ (25), ಮತ್ತು ಕುಕ್ಕಂದೂರು ನಿವಾಸಿ ರಕ್ಷಿತ್ ನಾಯ್ಕ (24) ಎಂದು ಗುರುತಿಸಲಾಗಿದೆ.
ಅತ್ತೂರು ಪದವಿನಲ್ಲಿ ಗೃಹಪ್ರವೇಶದ ವರ್ಷಾಚರಣೆ ಸಂಭ್ರಮವನ್ನು ಆಚರಿಸಿ ರಾತ್ರಿ ವೇಳೆ ರಕ್ಷಿತ್ ನನ್ನು ಬಿಟ್ಟು ಬರಲು ಕುಕ್ಕಂದೂರಿಗೆ ತೆರಳಿದ ಸಂದರ್ಭ ಈ ಘಟನೆ ನಡೆದಿದ್ದು, ಜೋಡುರಸ್ತೆಯ ಬಳಿ ಇರುವ ಬ್ರಹತ್ ಗ್ರಾತ್ರದ ಆಲದ ಮರಕ್ಕೆ ಬೈಕ್ ಗುದ್ದಿದ ಪರಿಣಾಮ ಇಬ್ಬರೂ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಕಾರ್ಕಳ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love