ಮಾಲು ತಲುಪಿಸದೆ ಮೋಸ ಮಾಡಿದ ಲಾರಿ ಚಾಲಕ; ಮಾಹಿತಿಗೆ ಪೋಲಿಸರ ಮನವಿ

Spread the love

ಮಾಲು ತಲುಪಿಸದೆ ಮೋಸ ಮಾಡಿದ ಲಾರಿ ಚಾಲಕ; ಮಾಹಿತಿಗೆ ಪೋಲಿಸರ ಮನವಿ

ಮಂಗಳೂರು: ಲಾರಿ ಚಾಲಕನೋರ್ವ ಬೆಂಗಳೂರಿಗೆ ತಲುಪಿಸಬೇಕಾದ ತಾಳೆ ಎಣ್ಣೆಯನ್ನು ತಲುಪಿಸದೆ ಮೋಸ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಅಗಸ್ಟ್ 30ರಂದು ಕುಳಾಯಿ ನಿವಾಸಿ ರವಿ ಶೆಟ್ಟಿ ಎಂಬವರು ಪಣಂಬೂರು ಠಾಣೆಗೆ ದೂರು ನೀಡಿದ್ದು, ಅಗಸ್ಟ್ 28ರಂದು  ಮೂಡಬಿದ್ರಿ   ಆಯುಷ್ ಎಂಬವರ ಮಾಲಿಕತ್ವದ  KA-51 B-7418ನೇ ಲಾರಿಯಲ್ಲಿ ಬೈಕಂಪಾಡಿಯಲ್ಲಿರುವ ರುಚಿ ಸೋಯ ಇಂಡಸ್ಟ್ರೀಯಿಂದ ಸುಮಾರು 7,50,000 ಮೌಲ್ಯದ 1050 ಬಾಕ್ಷ್ ತಾಳೆ ಎಣ್ಣೆಯನ್ನು ಚಾಲಕ ಅನೀಲ್ ಕುಮಾರ್ ಹೆಬ್ರಿ ಇವರಲ್ಲಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದು, ಆದರೆ ಆರೋಪಿ ಚಾಲಕನು ಹೇಳಿದ ಸ್ಥಳಕ್ಕೆ ಲಾರಿಯನ್ನು ಕೊಂಡುಹೋಗದೆ ಮತ್ತು ಲಾರಿಯಲ್ಲಿದ್ದ ಸೊತ್ತನ್ನು ತಲುಪಿಸದೇ ಮೋಸ ಮಾಡಿರುತ್ತಾನೆಂದು ಪಣಂಬೂರು ಠಾಣೆಗೆ ದೂರು ನೀಡಿದ್ದಾರೆ.

ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಈ ಮೇಲಿನ ನೊಂದಣಿ ಸಂಖ್ಯೆಯ ಲಾರಿ ಮತ್ತು ಚಾಲಕ ಎಲ್ಲಾದರೂ ಪತ್ತೆಯಾದಲ್ಲಿ ಪಣಂಬೂರು ಪೊಲೀಸ್ ಠಾಣೆಗೆ ಇಲ್ಲವೇ ಮಂಗಳೂರು ಸಿಟಿ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ  ಕೋರಿದೆ.

ಪಣಂಬೂರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0824-2220530, ಪೊಲೀಸ್ ಕಂಟ್ರೋಲ್ ರೂಂ 0824-2220800


Spread the love